ನವದೆಹಲಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಜುಲೈ 30ರಂದು ರನ್ವೇಯಿಂದ ವಿಮಾನ ಹೊರಹೋಗಿದ್ದಕ್ಕೆ ಏರ್ ಇಂಡಿಯಾ ಏಕ್ಸ್ಪ್ರೆಸ್ನ ಪೈಲಟ್ ಲೈಸನ್ಸ್ ಅನ್ನು ಒಂದು ವರ್ಷದವರೆಗೆ ಅಮಾನತು ಮಾಡಲಾಗಿದೆ.
ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಈ ಕ್ರಮ ಕೈಗೊಂಡಿದ್ದಾರೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದಐಎಕ್ಸ್–384 ವಿಮಾನ ಇಳಿಸುವಾಗ ಈ ಘಟನೆ ನಡೆದಿತ್ತು. ಅತಿ ವೇಗದಲ್ಲಿದ್ದ ವಿಮಾನ ರನ್ವೇನಿಂದ 900 ಮೀಟರ್ ದೂರ ಹೊರಹೋಗಿತ್ತು. ಇದರಿಂದ, ವಿಮಾನಕ್ಕೂ ಹಾನಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್ ಪ್ರವೀಣ್ ತುಮ್ರಾಮ್ ಅವರ ಲೈಸನ್ಸ್ ಅಮಾನುತುಗೊಳಿಸಲಾಗಿದೆ. ಘಟನೆ ನಡೆದ ದಿನದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.