ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಸೀಲ್ಡೌನ್ ಮಾಡುವ ನಿರ್ಧಾರವನ್ನು ಸ್ಥಳೀಯ ಮುಖಂಡರು, ಧಾರ್ಮಿಕ ಮುಖಂಡರು ಮತ್ತು ಸಾರ್ವಜನಿಕರು ಸೇರಿ ಕೈಗೊಂಡಿದ್ದಾರೆ. ಈ ಪ್ರದೇಶಗಳಲ್ಲಿ ಅನಗತ್ಯವಾಗಿ ಯಾರೂ ಓಡಾಡಲು ಅವಕಾಶವಿಲ್ಲ. ಅನಿವಾರ್ಯ ಕಾರಣಗಳಿದ್ದರೆ ಮತ್ತು ದುಡಿಯುವ ಜನರು ಮಾತ್ರ ಹೊರಗೆ ಹೋಗಿ, ಬರಬಹುದು. ಸ್ಥಳೀಯ ಜನರೇ ಪಹರೆ ಕಾಯುತ್ತಾರೆ’ ಎಂದರು.