ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ ಮುಖ್ಯಸ್ಥ ಎಂದು ಹೇಳಿಕೊಳ್ಳುತ್ತಿದ್ದ ಕೇರಳದ ಸ್ಯಾಮ್ ಪೀಟರ್, ಮಂಗಳೂರಿನ ಮೊಹಿದ್ದೀನ್ ಅಲಿಯಾಸ್ ಚೆರಿಯನ್, ಅಬ್ದುಲ್ ಲತೀಫ್, ಅಂಗ ರಕ್ಷಕರ ವೇಷದಲ್ಲಿದ್ದ ಮಡಿಕೇರಿಯ ಟಿ.ಕೆ.ಬೋಪಣ್ಣ, ವಿರಾಜಪೇಟೆಯ ಚಿನ್ನಪ್ಪ, ಬೆಂಗಳೂರಿನ ನೀಲಸಂದ್ರದ ಮದನ್ , ಕನಕಪುರ ಮುಖ್ಯ ರಸ್ತೆಯ ಸುನೀಲ್ ರಾಜು, ಉತ್ತರಹಳ್ಳಿಯ ಕೋದಂಡರಾಮ ಎಂಬುವವರನ್ನು ನಗರದ ಪಂಪ್ ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.