ನಂದೋಡಿ ಮಜಿರೆ ನಿವಾಸಿ ಕೆರಿಯಪ್ಪ (50) ಮೃತಪಟ್ಟವರು. ಜ್ವರ ಪೀಡಿತರಾಗಿ ಅರಲಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮತದಾನದ ದಿವಸ ಮತ ಹಾಕಿ ನಂತರ ಆಸ್ಪತ್ರೆಗೆ ಬಂದಾಗ ರಕ್ತ ಪರೀಕ್ಷಾ ವರದಿಯಲ್ಲಿ ಮಂಗನ ಕಾಯಿಲೆ ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗುವಂತೆ ಆರೋಗ್ಯ ಕಾರ್ಯಕರ್ತೆಯರು ಸಲಹೆ ನೀಡಿದ್ದರು.