‘ನೆಹರು, ಇಂದಿರಾಗಾಂಧಿಯ ಭಜನೆ ಮಾತ್ರ ಕಾಂಗ್ರೆಸ್ಗೆ ಗೊತ್ತು. ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನೇ ಸಹಿಸಿಕೊಳ್ಳಲಿಲ್ಲ. ಹಾದಿ–ಬೀದಿಯ ಉದ್ಯಾನಗಳಿಗೆಲ್ಲಾ ರಾಜೀವ್ ಗಾಂಧಿ, ನೆಹರು, ಇಂದಿರಾಗಾಂಧಿ ಹೆಸರಿಟ್ಟಿದ್ದಾರೆ. ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟರೆ, ಕಾಂಗ್ರೆಸ್ಗೆ ಯಾಕೆ ನೋವು’ ಎಂದು ಸಂಸದರು ಪ್ರಶ್ನಿಸಿದರು.