<p><strong>ಮೈಸೂರು:</strong> ‘ಕ್ಯಾಂಟೀನ್ಗೆ ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಿಸಲಿಲ್ವಾ ಸಿದ್ದರಾಮಯ್ಯ ಅವರೇ’ ಎಂದು ಸಂಸದ ಪ್ರತಾಪ ಸಿಂಹ ಗುರುವಾರ ಇಲ್ಲಿ ಪ್ರಶ್ನಿಸಿದರು.</p>.<p>ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂಬಂಧ ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ಪ್ರತಾಪ ಸಿಂಹ, ‘ಅವತ್ತು ನಿಮ್ಮ ಕಣ್ಣಿಗೆ ಕಂಡಿದ್ದು ಇಂದಿರಮ್ಮ ಹೆಸರು ಮಾತ್ರ’ ಎಂದು ಲೇವಡಿ ಮಾಡಿದರು.</p>.<p>‘ಸಿದ್ದರಾಮಯ್ಯ ಅವರೇ ಇಂತಹ ಆತ್ಮದ್ರೋಹದ ಮಾತು ಬಿಡಿ. ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ರಚನಾತ್ಮಕ ರಾಜಕಾರಣ ಮಾಡಿದರೆ ಮಾತ್ರ ನಿಮಗೆ ಉಳಿಗಾಲ. ಇಲ್ಲದಿದ್ದರೆ ನಿರ್ನಾಮ ಆಗಿಬಿಡ್ತೀರಾ’ ಎಂದು ಪ್ರತಾಪಸಿಂಹ ಕಿಡಿಕಾರಿದರು.</p>.<p>‘ನೆಹರು, ಇಂದಿರಾಗಾಂಧಿಯ ಭಜನೆ ಮಾತ್ರ ಕಾಂಗ್ರೆಸ್ಗೆ ಗೊತ್ತು. ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನೇ ಸಹಿಸಿಕೊಳ್ಳಲಿಲ್ಲ. ಹಾದಿ–ಬೀದಿಯ ಉದ್ಯಾನಗಳಿಗೆಲ್ಲಾ ರಾಜೀವ್ ಗಾಂಧಿ, ನೆಹರು, ಇಂದಿರಾಗಾಂಧಿ ಹೆಸರಿಟ್ಟಿದ್ದಾರೆ. ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟರೆ, ಕಾಂಗ್ರೆಸ್ಗೆ ಯಾಕೆ ನೋವು’ ಎಂದು ಸಂಸದರು ಪ್ರಶ್ನಿಸಿದರು.</p>.<p><strong>ಬೆಂಬಲಿಸಿ:</strong> ‘ವಿರೋಧವನ್ನೇ ಮಾಡಬೇಡಿ. ದೇಶಕ್ಕಾಗಿ ಪ್ರಾಣಕೊಟ್ಟವರ ಹೆಸರಿಡುವುದನ್ನು ವಿವಾದ ಮಾಡುವುದು ಒಳ್ಳೆಯದಲ್ಲ. ಎಲ್ಲರೂ ಬೆಂಬಲಿಸಿ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಕ್ಯಾಂಟೀನ್ಗೆ ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಿಸಲಿಲ್ವಾ ಸಿದ್ದರಾಮಯ್ಯ ಅವರೇ’ ಎಂದು ಸಂಸದ ಪ್ರತಾಪ ಸಿಂಹ ಗುರುವಾರ ಇಲ್ಲಿ ಪ್ರಶ್ನಿಸಿದರು.</p>.<p>ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂಬಂಧ ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ಪ್ರತಾಪ ಸಿಂಹ, ‘ಅವತ್ತು ನಿಮ್ಮ ಕಣ್ಣಿಗೆ ಕಂಡಿದ್ದು ಇಂದಿರಮ್ಮ ಹೆಸರು ಮಾತ್ರ’ ಎಂದು ಲೇವಡಿ ಮಾಡಿದರು.</p>.<p>‘ಸಿದ್ದರಾಮಯ್ಯ ಅವರೇ ಇಂತಹ ಆತ್ಮದ್ರೋಹದ ಮಾತು ಬಿಡಿ. ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ರಚನಾತ್ಮಕ ರಾಜಕಾರಣ ಮಾಡಿದರೆ ಮಾತ್ರ ನಿಮಗೆ ಉಳಿಗಾಲ. ಇಲ್ಲದಿದ್ದರೆ ನಿರ್ನಾಮ ಆಗಿಬಿಡ್ತೀರಾ’ ಎಂದು ಪ್ರತಾಪಸಿಂಹ ಕಿಡಿಕಾರಿದರು.</p>.<p>‘ನೆಹರು, ಇಂದಿರಾಗಾಂಧಿಯ ಭಜನೆ ಮಾತ್ರ ಕಾಂಗ್ರೆಸ್ಗೆ ಗೊತ್ತು. ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನೇ ಸಹಿಸಿಕೊಳ್ಳಲಿಲ್ಲ. ಹಾದಿ–ಬೀದಿಯ ಉದ್ಯಾನಗಳಿಗೆಲ್ಲಾ ರಾಜೀವ್ ಗಾಂಧಿ, ನೆಹರು, ಇಂದಿರಾಗಾಂಧಿ ಹೆಸರಿಟ್ಟಿದ್ದಾರೆ. ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟರೆ, ಕಾಂಗ್ರೆಸ್ಗೆ ಯಾಕೆ ನೋವು’ ಎಂದು ಸಂಸದರು ಪ್ರಶ್ನಿಸಿದರು.</p>.<p><strong>ಬೆಂಬಲಿಸಿ:</strong> ‘ವಿರೋಧವನ್ನೇ ಮಾಡಬೇಡಿ. ದೇಶಕ್ಕಾಗಿ ಪ್ರಾಣಕೊಟ್ಟವರ ಹೆಸರಿಡುವುದನ್ನು ವಿವಾದ ಮಾಡುವುದು ಒಳ್ಳೆಯದಲ್ಲ. ಎಲ್ಲರೂ ಬೆಂಬಲಿಸಿ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>