ಬೆಂಗಳೂರು:‘ಹಿರಿಯ ನಾಯಕರ ಮಾತಿಗೆ ಬೆಲೆಕೊಟ್ಟು ಕಾಲಾವಕಾಶ ಕೇಳಿದ್ದೀನಿ. ಸುಧಾಕರ್ ಜೊತೆಗೆ ಚರ್ಚೆ ಮಾಡಿ, ಅವರನ್ನು ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿಸುತ್ತೇನೆ. ನನಗಂತೂ ಇಲ್ಲಿಯೇ (ಕಾಂಗ್ರೆಸ್) ಉಳಿಯಬೇಕು ಅಂತ ಇದೆ’ ಎಂದು ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.