ಗುರುವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ನಂತರದ ಬೆಳವಣಿಗೆಗಳು ಮನಸ್ಸಿಗೆ ತುಂಬಾ ನೋವು ತಂದಿವೆ. ಮುದ್ದಹನುಮೇಗೌಡ ಕೋಟಿಗಟ್ಟಲೆ ಹಣದ ಡೀಲ್ ಮಾಡಿಕೊಂಡು ನಾಮಪತ್ರ ವಾಪಸ್ ಪಡೆದುಕೊಂಡರು ಎಂಬ ಆಡಿಯೊ ಬಗ್ಗೆ ಯಾರಾದರೂ ದೊಡ್ಡವರೇ ನಿರಾಕ
ರಿಸಿ, ಸ್ಪಷ್ಟಪಡಿಸಬಹುದಿತ್ತು. ಆದರೆ, ಯಾರೂ ಬಾಯಿ ಬಿಡಲಿಲ್ಲ. ಅದಕ್ಕಾಗಿಯೇ ಇಲ್ಲಿಗೆ ಬಂದು ಸ್ಪಷ್ಟನೆ ನೀಡುವ ಅನಿವಾರ್ಯತೆ ಎದುರಾಯಿತು’ ಎಂದು ಯಾರ ಹೆಸರನ್ನೂ ಹೇಳದೆ ಬೇಸರ ವ್ಯಕ್ತಪಡಿಸಿದರು.