ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಾರು ಹತ್ತಿಸಿ ಇನ್‌ಸ್ಪೆಕ್ಟರ್‌ ಹತ್ಯೆಗೆ ಯತ್ನ, ನಾಲ್ವರು ಆರೋಪಿಗಳ ಬಂಧನ

Last Updated 4 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಮೈಸೂರು: ವಾಹನ ತಪಾಸಣೆ ನಡೆಸುತ್ತಿದ್ದ ಕುವೆಂಪುನಗರ ಠಾಣೆ ಇನ್‌ಸ್ಪೆಕ್ಟರ್‌ ರಾಜು ಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕುವೆಂಪುನಗರ ನಿವಾಸಿಗಳಾದ ಕಿರಣ್ (30), ಕೀರ್ತಿ (35), ಕಿರಣ್‌ಕುಮಾರ್ (34), ಮಂಜುನಾಥ್ (32) ಬಂಧಿತರು.

ಇನ್‌ಸ್ಪೆಕ್ಟರ್ ರಾಜು ಅವರು ಬೋಗಾದಿ ಚೆಕ್‌ಪೋಸ್ಟ್‌ ಬಳಿ ಭಾನುವಾರ ರಾತ್ರಿ 12.30ರ ಸಮಯದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವುದನ್ನು ಗಮನಿಸಿದ ಆರೋಪಿಗಳು, ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದರು. ಅನುಮಾನಗೊಂಡು ಕಾರನ್ನು ಬೆನ್ನಟ್ಟಿ ಬ್ಯಾಂಕರ್ಸ್ ಕಾಲೊನಿಯ ಸಾಯಿ ಸರಸ್ವತಿ ಶಾಲೆ ಬಳಿ ಪೊಲೀಸರು ವಾಹನ ತಡೆದರು.ವಾಹನದಿಂದ ಕೆಳಗೆ ಇಳಿದು ಕಾರಿನತ್ತ ಬರುತ್ತಿದ್ದ ರಾಜು ಮೇಲೆ ಕಾರು ಹರಿಸಿ ಕೊಲ್ಲಲು ಯತ್ನಿಸಿದ್ದಾರೆ. ಈ ವೇಳೆಗೆ ಸ್ಥಳಕ್ಕೆ ಬಂದ ಸರಸ್ವತಿಪುರಂ ಠಾಣೆ ಇನ್‌ಸ್ಪೆಕ್ಟರ್ ಧನರಾಜ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT