ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗೆ ತಲೆಬಾಗುವೆ: ಎಸ್.ಎಲ್‌.ಭೈರಪ್ಪ

ದಸರಾ: ಭೈರಪ್ಪ, ಪ್ರಮೋದಾದೇವಿ ಒಡೆಯರ್‌ಗೆ ಅಧಿಕೃತ ಆಹ್ವಾನ
Last Updated 19 ಸೆಪ್ಟೆಂಬರ್ 2019, 20:44 IST
ಅಕ್ಷರ ಗಾತ್ರ

ಮೈಸೂರು: ‘ದಸರಾ ಉದ್ಘಾಟಿಸಲು, ಸರ್ಕಾರ ಪ್ರೀತಿಯಿಂದ ಆಹ್ವಾನಿಸಿದೆ. ಆ ಪ್ರೀತಿಗೆ ಕೃತಜ್ಞನಾಗಿದ್ದೇನೆ’ ಎಂದು ಸಾಹಿತಿ ಎಸ್‌.ಎಲ್‌. ಭೈರ‍ಪ್ಪ ಹೇಳಿದರು.

ಸಚಿವ ವಿ.ಸೋಮಣ್ಣ ಅವರು ಭೈರಪ್ಪ ಅವರನ್ನು ಅಧಿಕೃತವಾಗಿ ದಸರಾ ಉದ್ಘಾಟನೆಗೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೈರಪ್ಪ ಅವರು, ‘ಸಾಹಿತಿಗಳನ್ನು ನಿಜವಾಗಿ ಪ್ರೀತಿಸುವ ವಿದ್ಯಾವಂತರು ಈ ಸರ್ಕಾರದಲ್ಲಿ ಇದ್ದಾರೆ. ಅದು ಬಹಳ ಮುಖ್ಯ. ಸಾಹಿತಿಗಳಿಗೆ ಏನೋ ಕೊಟ್ಟು ತಾವು ಹೇಳಿದ್ದನ್ನು ಕೇಳಿಸಿಕೊಳ್ಳಬೇಕು ಎಂಬ ಅಹಂಕಾರ ರಾಜ್ಯ, ಕೇಂದ್ರ ಸರ್ಕಾರಕ್ಕಿಲ್ಲ’ ಎಂದು ಹೇಳಿದರು.

‘ನಾನು ಇಂಗ್ಲೆಂಡ್‌ಗೆ ತೆರಳಬೇಕಿತ್ತು. ದಸರೆಗಾಗಿ, ಭೇಟಿ ಮುಂದೂಡಿದ್ದೇನೆ’ ಎಂದು ತಿಳಿಸಿದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ನಂತರ ಉತ್ಸವಕ್ಕೆ ಆಹ್ವಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT