ಮೈಸೂರು:ದೆಹಲಿ ಸೇರಿದಂತೆ ದೇಶದಹಲವು ಭಾಗಗಳಲ್ಲಿ ಕೇಂದ್ರದ ಕುಮ್ಮಕ್ಕಿನಿಂದಲೇ ಗಲಭೆಗಳು ನಡೆಯುತ್ತಿವೆ. ಕೇಂದ್ರ ಗೃಹಸಚಿವರು ಇದರ ನೇತೃತ್ವ ವಹಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಈ ವಿಷಯ ತಿಳಿಸಿದ ಅವರು, ದೆಹಲಿ ಗಲಭೆ ಕುರಿತು ಅಲ್ಲಿನಮುಖ್ಯಮಂತ್ರಿ ಮೌನ ವಹಿಸಿರುವುದು ವಿಪರ್ಯಾಸ ಎಂದೂಮೊಯಿಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಸಹಿಷ್ಟುತೆಯಿಂದಾಗಿ ಆರ್ಥಿಕ ದರ ಕುಂಠಿತ
ನಂತರ ಮಾತನಾಡಿದ ಮೊಯಿಲಿ,ಹೆಚ್ಚುತ್ತಿರುವ ಅಸಹಿಷ್ಣುತೆಯಿಂದಾಗಿಯೇ ಆರ್ಥಿಕ ಬೆಳವಣಿಗೆ ದರ ಕಡಿಮೆಯಾಗುತ್ತಿದೆ ಎಂದರು.ಅಸಹಿಷ್ಣುತೆ ಇದ್ದರೆ ಯಾರೂ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಇದರಿಂದ ಸಹಜವಾಗಿಯೇ ಆರ್ಥಿಕ ಬೆಳವಣಿಗೆ ದರ ಕಡಿಮೆಯಾಗುತ್ತಿದೆ ಎಂದರು.
‘ಹಿಂಸೆ ಎಷ್ಟರಮಟ್ಟಿಗೆ ವಿಜೃಂಭಿಸುತ್ತಿದೆ ಎಂದರೆ ಸಣ್ಣಪುಟ್ಟ ಹಿಂಸೆಗೆ ಪ್ರತಿಕ್ರಿಯಿಸಲಾರದಷ್ಟು ಸಮಾಜ ಸಂವೇದನಾರಹಿತವಾಗಿದೆ. ದೊಡ್ಡ ಹಿಂಸೆಗಷ್ಟೇ ಪ್ರತಿಕ್ರಿಯೆ ಎಂಬಂತಾಗಿದೆ’ ಎಂದು ಹೇಳಿದ್ದಾರೆ.