<p><strong>ಕಲಬುರ್ಗಿ: </strong>ಸೂರ್ಯಗ್ರಹಣದ ವೇಳೆ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಇಲ್ಲಿನ ಬಿದ್ದಾಪೂರ ಕಾಲೊನಿಯ ರಾಯರ ಮಠದಲ್ಲಿ ಭಾನುವಾರ ನವಗ್ರಹ ಶಾಂತಿ ಹೋಮ ಮಾಡಲಾಯಿತು.</p>.<p>ಮಠದ ಆವರಣದಲ್ಲಿ ನಸುಕಿನ 4ಕ್ಕೇ ಸೂರ್ಯನಾರಾಯಣ, ಶನಿದೇವ, ನವಗ್ರಹ ಮೂರ್ತಿಗಳನ್ನು ಮಾಡಿ ಪ್ರತಿಷ್ಠಾಪಿಸಲಾಯಿತು.</p>.<p>ಸರಿಯಾಗಿ ಬೆಳಿಗ್ಗೆ 10.04ಕ್ಕೆ ಗ್ರಹಣ ಆರಂಭವಾದ ತಕ್ಷಣ ಹೋಮ ಕಾರ್ಯಗಳು ಆರಂಭವಾದವು. ಗ್ರಹಣವು ಪೂರ್ಣ ವಿಮೋಚನೆ ಪಡೆದ ಮಧ್ಯಾಹ್ನ 1.30ರವರೆಗೂ ನಿರಂತರ ಮಂತ್ರಘೋಷಗಳು ಮೊಳಗಿದವು.</p>.<p>ವಿಷ್ಣುಸಹಸ್ರನಾಮ ಪಾರಾಯಣ, ರಾಯರ ಅಷ್ಟೋತ್ತರ, ಮಧ್ವನಾಮ ಪಾರಾಯಣ, ಭಗವದ್ಗೀತೆಯ 11ನೇ ಸಗ್ಗ ಪಾರಾಯಣ ಮಾಡಲಾಯಿತು.</p>.<p>ಹವನ ಕಾರ್ಯದಲ್ಲಿ ಪಾಲ್ಗೊಂಡ ನೂರಾರು ಮಹಿಳೆಯರು, ಕೊರೊನಾದಿಂದ ವಿಶ್ವವನ್ನು ರಕ್ಷಿಸು, ಸಮೃದ್ಧಿ ನೀಡು ಎಂದು ಸೂರ್ಯದೇವನಲ್ಲಿ ಬೇಡಿಕೊಂಡರು.</p>.<p>ನವಲಿ ಕೃಷ್ಣಾಚಾರ್ಯ, ಗುರುರಾಜಾಚಾರ್, ಶಾಮಾಚಾರ್, ಪದ್ಮನಾಭಾಚಾರ್, ಶ್ರೀಹರಿ ಆಚಾರ್, ಆಶ್ರಿತ ಆಚಾರ್, ರಾಕೇಂದು ಕನಕವೀಡು ಅವರು ಹೋಮ ಹವನಾದಿಗಳನ್ನು ನೆರವೇರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಸೂರ್ಯಗ್ರಹಣದ ವೇಳೆ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಇಲ್ಲಿನ ಬಿದ್ದಾಪೂರ ಕಾಲೊನಿಯ ರಾಯರ ಮಠದಲ್ಲಿ ಭಾನುವಾರ ನವಗ್ರಹ ಶಾಂತಿ ಹೋಮ ಮಾಡಲಾಯಿತು.</p>.<p>ಮಠದ ಆವರಣದಲ್ಲಿ ನಸುಕಿನ 4ಕ್ಕೇ ಸೂರ್ಯನಾರಾಯಣ, ಶನಿದೇವ, ನವಗ್ರಹ ಮೂರ್ತಿಗಳನ್ನು ಮಾಡಿ ಪ್ರತಿಷ್ಠಾಪಿಸಲಾಯಿತು.</p>.<p>ಸರಿಯಾಗಿ ಬೆಳಿಗ್ಗೆ 10.04ಕ್ಕೆ ಗ್ರಹಣ ಆರಂಭವಾದ ತಕ್ಷಣ ಹೋಮ ಕಾರ್ಯಗಳು ಆರಂಭವಾದವು. ಗ್ರಹಣವು ಪೂರ್ಣ ವಿಮೋಚನೆ ಪಡೆದ ಮಧ್ಯಾಹ್ನ 1.30ರವರೆಗೂ ನಿರಂತರ ಮಂತ್ರಘೋಷಗಳು ಮೊಳಗಿದವು.</p>.<p>ವಿಷ್ಣುಸಹಸ್ರನಾಮ ಪಾರಾಯಣ, ರಾಯರ ಅಷ್ಟೋತ್ತರ, ಮಧ್ವನಾಮ ಪಾರಾಯಣ, ಭಗವದ್ಗೀತೆಯ 11ನೇ ಸಗ್ಗ ಪಾರಾಯಣ ಮಾಡಲಾಯಿತು.</p>.<p>ಹವನ ಕಾರ್ಯದಲ್ಲಿ ಪಾಲ್ಗೊಂಡ ನೂರಾರು ಮಹಿಳೆಯರು, ಕೊರೊನಾದಿಂದ ವಿಶ್ವವನ್ನು ರಕ್ಷಿಸು, ಸಮೃದ್ಧಿ ನೀಡು ಎಂದು ಸೂರ್ಯದೇವನಲ್ಲಿ ಬೇಡಿಕೊಂಡರು.</p>.<p>ನವಲಿ ಕೃಷ್ಣಾಚಾರ್ಯ, ಗುರುರಾಜಾಚಾರ್, ಶಾಮಾಚಾರ್, ಪದ್ಮನಾಭಾಚಾರ್, ಶ್ರೀಹರಿ ಆಚಾರ್, ಆಶ್ರಿತ ಆಚಾರ್, ರಾಕೇಂದು ಕನಕವೀಡು ಅವರು ಹೋಮ ಹವನಾದಿಗಳನ್ನು ನೆರವೇರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>