ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರಗಳು ಬೆಟ್ಟದಲ್ಲಿಯೇ ಇವೆ. ಮಂಗಳೂರು ರಸ್ತೆಯಿಂದ ನೋಡಿದರೆ ಮನೆಗಳು ನಕ್ಷತ್ರಗಳಂತೆ ಕಾಣುತ್ತಿದ್ದವು. ಕಳೆದ ವರ್ಷ ಸುರಿದ ಮಹಾಮಳೆಗೆ ಈ ಎರಡೂ ಬಡಾವಣೆಗಳಲ್ಲಿ 143 ಮನೆಗಳು ಧರೆಗುರುಳಿದ್ದವು. ಕೆಲವು ಮನೆಗಳು ಬಿರುಕುಬಿಟ್ಟಿದ್ದವು. ಮಳೆ ತಗ್ಗಿದ ನಂತರ ಮರಳಿದ ಜನರು, ಅಂಥ ಮನೆಗಳಲ್ಲೇ ವಾಸ್ತವ್ಯ ಹೂಡಿದ್ದರು. ಈಗ ಅವರೆಲ್ಲ ಮತ್ತೆ ಆತಂಕಕ್ಕೀಡಾಗಿದ್ದಾರೆ.