<p><strong>ಪೊನ್ನಂಪೇಟೆ: </strong>ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ನಾಲ್ಕೇರಿ ಬಾಡಗ ಗ್ರಾಮದಲ್ಲಿ ನಡೆಯುತ್ತಿದ್ದ ಮರ ಅಕ್ರಮ ಮಾರಾಟ ಪ್ರಕರಣ ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭಾನುವಾರ ಯಶಸ್ವಿಯಾಗಿದ್ದಾರೆ.</p>.<p>ಜಿಲ್ಲೆಯಲ್ಲಿ ದೊಡ್ಡ ಮರ ಅಕ್ರಮ ಮಾರಾಟ ಪ್ರಕರಣ ಇದಾಗಿದ್ದು, ಬಂಧಿತರದಿಂದ ₹ 1 ಕೋಟಿ ಮೌಲ್ಯದ ಮರದ ದಿಮ್ಮಿ ಹಾಗೂ ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಜಾತಿಯ ಬೆಲೆ ಬಾಳುವ ಮರದ 288 ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಪ್ರಮುಖ ಆರೋಪಿ ಪಲ್ಲೇರಿ ಗ್ರಾಮದ ಕಳ್ಳಿಚಂಡ ನೋಬನ್, ನಾಲ್ಕೇರಿ ಗ್ರಾಮದ ಲಾರಿ ಚಾಲಕ ರಾಜೇಂದ್ರ ಹಾಗೂ ಕಾರ್ಮಿಕ ಅಯ್ಯಪ್ಪ ಬಂಧಿತರು.</p>.<p>ನಾಟಾಗಳು ಕಾಣದಂತೆ ಲಾರಿಯ ಸುತ್ತಲೂ ಮರದ ಪುಡಿ ತುಂಬಿದ ಚೀಲಗಳನ್ನಿಟ್ಟು ಸಾಗಣೆ ಮಾಡುತ್ತಿದ್ದರು. ಗೋಣಿಕೊಪ್ಪಲು ಸಮೀಪ ಭಾನುವಾರ ಲಾರಿ ತಪಾಸಣೆ ಮಾಡುವಾಗ ಮರಗಳನ್ನು ಕಡಿದು ನಾಟಾವಾಗಿ ಪರಿವರ್ತಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಕಳ್ಳಚಂಡ ನೋಬನ್ ಅವರ ಮನೆಯ ಬಳಿಯೂ ಶೋಧಿಸಿದಾಗ ಅಲ್ಲೂ ತೇಗ, ಬೀಟೆ, ಹೆಬ್ಬಲಸು ಹಾಗೂ ಹಲಸಿನ ದಿಮ್ಮಿಗಳು ಪತ್ತೆಯಾಗಿವೆ.</p>.<p>ಎರಡು ಲಾರಿ, ಜೀಪು, ಕಾರು ಹಾಗೂ ಕ್ರೇನ್ ವಶಕ್ಕೆ ಪಡೆಯಲಾಗಿದೆ. ಕಾನೂನು ರೀತಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೊನ್ನಂಪೇಟೆ: </strong>ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ನಾಲ್ಕೇರಿ ಬಾಡಗ ಗ್ರಾಮದಲ್ಲಿ ನಡೆಯುತ್ತಿದ್ದ ಮರ ಅಕ್ರಮ ಮಾರಾಟ ಪ್ರಕರಣ ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭಾನುವಾರ ಯಶಸ್ವಿಯಾಗಿದ್ದಾರೆ.</p>.<p>ಜಿಲ್ಲೆಯಲ್ಲಿ ದೊಡ್ಡ ಮರ ಅಕ್ರಮ ಮಾರಾಟ ಪ್ರಕರಣ ಇದಾಗಿದ್ದು, ಬಂಧಿತರದಿಂದ ₹ 1 ಕೋಟಿ ಮೌಲ್ಯದ ಮರದ ದಿಮ್ಮಿ ಹಾಗೂ ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಜಾತಿಯ ಬೆಲೆ ಬಾಳುವ ಮರದ 288 ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಪ್ರಮುಖ ಆರೋಪಿ ಪಲ್ಲೇರಿ ಗ್ರಾಮದ ಕಳ್ಳಿಚಂಡ ನೋಬನ್, ನಾಲ್ಕೇರಿ ಗ್ರಾಮದ ಲಾರಿ ಚಾಲಕ ರಾಜೇಂದ್ರ ಹಾಗೂ ಕಾರ್ಮಿಕ ಅಯ್ಯಪ್ಪ ಬಂಧಿತರು.</p>.<p>ನಾಟಾಗಳು ಕಾಣದಂತೆ ಲಾರಿಯ ಸುತ್ತಲೂ ಮರದ ಪುಡಿ ತುಂಬಿದ ಚೀಲಗಳನ್ನಿಟ್ಟು ಸಾಗಣೆ ಮಾಡುತ್ತಿದ್ದರು. ಗೋಣಿಕೊಪ್ಪಲು ಸಮೀಪ ಭಾನುವಾರ ಲಾರಿ ತಪಾಸಣೆ ಮಾಡುವಾಗ ಮರಗಳನ್ನು ಕಡಿದು ನಾಟಾವಾಗಿ ಪರಿವರ್ತಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಕಳ್ಳಚಂಡ ನೋಬನ್ ಅವರ ಮನೆಯ ಬಳಿಯೂ ಶೋಧಿಸಿದಾಗ ಅಲ್ಲೂ ತೇಗ, ಬೀಟೆ, ಹೆಬ್ಬಲಸು ಹಾಗೂ ಹಲಸಿನ ದಿಮ್ಮಿಗಳು ಪತ್ತೆಯಾಗಿವೆ.</p>.<p>ಎರಡು ಲಾರಿ, ಜೀಪು, ಕಾರು ಹಾಗೂ ಕ್ರೇನ್ ವಶಕ್ಕೆ ಪಡೆಯಲಾಗಿದೆ. ಕಾನೂನು ರೀತಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>