ರಾಮನಗರ: ಪೂರ್ವನಿಗದಿಯಂತೆ ಇದೇ 17ರಂದು ನಿಖಿಲ್-ರೇವತಿ ವಿವಾಹ ನಡೆಯಲಿದೆ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡೂ ಕುಟುಂಬದ 15-20 ಜನರು ಸೇರಿ ಸರಳವಾಗಿ ಬೆಂಗಳೂರಿನ ಮನೆಯ ಆವರಣದಲ್ಲೇ ಅಂದು ವಿವಾಹ ನೆರವೇರಿಸುತ್ತೇವೆ. ಮುಂದೆ ಅವಕಾಶ ಸಿಕ್ಕಾಗ ಬೇರೆ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ’ ಎಂದರು.
‘ಲಾಕ್ಡೌನ್ನಿಂದ ರಾಜ್ಯದಲ್ಲಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಬೆಳೆಯ ಮೌಲ್ಯಕ್ಕೆ ಸರಿಸಮನಾಗಿ ಎಕರೆಗೆ ₹10-20 ಸಾವಿರ ಪರಿಹಾರ ನೀಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.