ಮೂಲ ವಿಡಿಯೊದಲ್ಲಿ ಏನಿದೆ?
ಕಾರ್ಯಕ್ರಮವೊಂದರಲ್ಲಿ ಮೈಕ್ ಹಿಡಿದ ಕುಮಾರಸ್ವಾಮಿಗೆ ಅಲ್ಲಿದ್ದವರೊಬ್ಬರು ಸರ್ ನಿಖಿಲ್ ಅಂತ ಕೂಗಿ ಸರ್ ಎನ್ನುತ್ತಾರೆ. ಆಗ ಕುಮಾರಸ್ವಾಮಿ, ‘ನಿಖಿಲ್ ಎಲ್ಲಿದ್ದೀಯಪ್ಪಾ... ನಿಖಿಲ್, ಓ ನಿಖಿಲ್ ಎಲ್ಲಿದ್ದೀ’ ಎಂದು ಕೇಳುತ್ತಾರೆ. ಈ ಮಧ್ಯೆ ನಿಖಿಲ್ ಕೈ ತೋರಿಸುವ ವಿಡಿಯೊ ಕಾಣುತ್ತದೆ. ಆ ವೇಳೆ, ಕುಮಾರಸ್ವಾಮಿ ‘ಓ ಈಗಾಗಲೇ ನೀನು ಜನಗಳ ಮಧ್ಯೆ ಸೇರಿಬಿಟ್ಟಿದ್ದೀಯಾ. ಜನಗಳ ಆಶೀರ್ವಾದ ಪಡೆಯಲು ಜನಗಳ ಜತೆ ಸೇರಿದ್ದೀಯ ಹಾಗಿದ್ರೆ’ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ನಿಖಿಲ್, ‘ನಿಮ್ಮನ್ನು ನಮ್ಮ ತಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಈ ಜನಗಳ ಮಧ್ಯೆ ಇದ್ದೀನಿ ಅಪ್ಪಾ’ ಎನ್ನುತ್ತಾರೆ.