‘ಪುಣೆಯ ಕೆ.ಎಫ್.ಬಯೊಟೆಕ್ ಕಂಪನಿಯಿಂದ ಒಂದು ಸಸಿಗೆ ₹ 35ರಂತೆ 13 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದೆ. ₹ 14 ಲಕ್ಷ ಖರ್ಚಾಗಿತ್ತು. ಇದೀಗ ಜರ್ಬೇರ ಹೂವು ಅರಳಿ ನಿಂತಿದೆ. ಆದರೆ, ಒಪ್ಪಂದದ ಪ್ರಕಾರ ಬೆಂಗಳೂರಿನ ಹೂವಿನ ರಫ್ತುದಾರರು ಖರೀದಿಗೆ ಬರಲಿಲ್ಲ. ಹೀಗಾಗಿ, ಗಿಡದಿಂದ ಹೂವು ಕಿತ್ತು ಕಸದ ಗುಂಡಿಗೆ ಹಾಕುತ್ತಿದ್ದೇನೆ’ ಎಂದು ಸೋಮಶೇಖರ್ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.