ಬೆಂಗಳೂರು:ಆಡಿಯೊ ಪ್ರಕರಣದ ರುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಆದ್ದರಿಂದ, ಎಸ್ಐಟಿಯ ಹೊರಗೆ ತನಿಖೆಯಾಗಲಿ ಎಂದು ಬಿಜೆಪಿ ಶಾಸಕ ಶಾಸಕ ಜೆ.ಸಿ.ಮಾಧುಸ್ವಾಮಿ ಒತ್ತಾಯಿಸಿದರು.
ಉಖ್ಯಮಂತ್ರಿ ಅವರ ಅಧಿನದಲ್ಲಿರುವ ಸಮಿತಿಗಳಿಂದ ನ್ಯಾಯಯುತ ತನಿಖೆಯಾಗುತ್ತದೆ ಎಂಬ ವಿಶ್ವಾಸ ಇಲ್ಲ. ಆದ್ದರಿಂದ, ತಮ್ಮ ಸಲಹೆಯನ್ನು ಮರುಪರಿಶೀಲನೆ ಮಾಡುವಂತೆ ಕೋರುತ್ತೇವೆ ಎಂದು ಸುದ್ದಿಗಾರರರಿಗೆ ತಿಳಿಸಿದರು.
ಸಿಎಂ ನೇತೃತ್ವದಲ್ಲಿ ಎಸ್ಐಟಿ ತನಿಖೆ ಆಗಬಹುದು. ಆದರೆ, ನಿಷ್ಪಕ್ಷಪಾತ ನಿಖೆಯಾಗುತ್ತದೆ ಎಂಬುದರ ಬಗ್ಗೆ ವಿಶ್ವಾಸವಿಲ್ಲ. ಬದಲಿಗೆ ನ್ಯಾಯಾಂಗ ತನಿಖೆ ವಹಿಸಲಿ ಅಥವಾ ಅವರೇ ಸದನ ಸಮಿತಿ ರಚಿಸಲಿ ಎಂದು ಹೇಳಿದರು.