ವಿಧಾನ ಮಂಡಲದ ಉಭಯಸದನಗಳ ಗೌರವಕ್ಕೆ ತರುವ ಯತ್ನ ನಡೆದಿದೆ. ಸಭಾಧ್ಯಕ್ಷರ ಪೀಠದ ಬಗ್ಗೆಯೇ ಹಗುರವಾದ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಉಳಿದ ಎಲ್ಲವನ್ನು ಬದಿಗೊತ್ತಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾನಾಯಕಿ ಜಯಮಾಲಾ ಒತ್ತಾಯಿಸಿದರು. ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸುವುದು ಸರಿ ಅಲ್ಲ. ಅವರು ದಯವಿಟ್ಟು ಆಸನಗಳಿಗೆ ಮರಳ ಬೇಕು ಎಂದುಮನವಿ ಮಾಡಿದರು. ಬಳಿಕ ಸದಸ್ಯರು ಧರಣಿ ಕೈಬಿಟ್ಟರು.