ಸಾಗರ: ಇಲ್ಲಿನ ಉದ್ಯಮಿ, ಹವ್ಯಾಸಿ ಛಾಯಾಚಿತ್ರಗ್ರಾಹಕ ಎಂ.ನಾಗರಾಜ್ ಅವರು ಕ್ಲಿಕ್ಕಿಸಿರುವ ಫೋಟೊಗೆ ಪಶ್ಚಿಮ ಬಂಗಾಲದ ಮಿಡ್ನಾಪುರದ ಪೋಟೊಗ್ರಫಿ ಫೌಂಡೇಷನ್ನ 2018ರ ‘ಸೌತ್ ಏಷ್ಯನ್ ಇಂಟರ್ನ್ಯಾಷನಲ್ ರಡು ಸರ್ಕ್ಯೂಟ್’ ಪ್ರಶಸ್ತಿ ಲಭಿಸಿದೆ.
ಹಂಪಿ ಸಮೀಪದ ಕಮಲಾಪುರದಲ್ಲಿ ‘ಅಸ್ಯಾಸಿನ್ ಬಗ್’ ಎಂಬ ಕೀಟ ತನ್ನ ಪೊರೆ ಕಳಚುವ ಅಪರೂಪದ ದೃಶ್ಯವನ್ನು ನಾಗರಾಜ್ ಕ್ಯಾಮೆರಾ ಕಣ್ಣಿನಿಂದ ಸೆರೆಹಿಡಿದ್ದರು. ಈ ಚಿತ್ರ ಸಲಾನ್ ಮೆರಿಟ್ ಮೆಡಲ್ ವಿಭಾಗದಲ್ಲಿ ಎರಡು ಪ್ರಶಸ್ತಿಗಳಿಗೆ ಆಯ್ಕೆಯಾಗಿದೆ.