<p><strong>ಬೆಂಗಳೂರು: </strong>ನಗರದಲ್ಲಿ ಕೆಲ ದಿನಗಳಿಂದ ತಾಪಮಾನ ಹೆಚ್ಚಾಗಿದ್ದು, ಇದರ ನಡುವೆಯೇ ಶುಕ್ರವಾರ ಸಂಜೆ ಮಳೆ ಸುರಿದು ತಂಪೆರೆಯಿತು.</p>.<p>ಸಂಪಂಗಿರಾಮನಗರ, ಶಾಂತಿನಗರ, ಗಾಂಧಿನಗರ, ಎಂ.ಜಿ.ರಸ್ತೆ, ಇಂದಿರಾನಗರ, ಹಲಸೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ತುಂತುರು ಮಳೆ ಆಯಿತು.</p>.<p>ಬಳ್ಳಾರಿ ರಸ್ತೆಯಲ್ಲಿರುವ ಪ್ರದೇಶಗಳಲ್ಲಿ ಜೋರು ಮಳೆ ಸುರಿಯಿತು. ಬ್ಯಾಟರಾಯನಪುರ ಮೇಲ್ಸೇತುವೆಯಲ್ಲೇ ನೀರು ಹರಿಯಿತು. ನೀರಿನಲ್ಲೇ ವಾಹನಗಳು ಸಂಚರಿಸಿದವು. ಸಂಚಾರ ಪೊಲೀಸರೇ ಮೇಲ್ಸೇತುವೆಯಲ್ಲಿ ನೀರು ಹೋಗಲು ಜಾಗ ಮಾಡಿದರು. ಕೆಲ ಗಂಟೆಗಳ ಬಳಿಕವೇ ಮೇಲ್ಸೇತುವೆ ಯಥಾಸ್ಥಿತಿಗೆ ಬಂತು.</p>.<p>ಬೆಳಿಗ್ಗೆಯಿಂದಲೇನಗರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣದೊಂದಿಗೆ ಜೋರು ಗಾಳಿ ಬೀಸಿತು. ನಂತರ, ಜಿನುಗು ಮಳೆ ಶುರುವಾಯಿತು. ಕೆಲವೆಡೆ ಜೋರಾಗಿಯೇ ಸುರಿಯಿತು.</p>.<p>‘ಬ್ಯಾಟರಾಯನಪುರ ಮೇಲ್ಸೇತುವೆ ಸೇರಿ ಕೆಲವೆಡೆ ನೀರು ನಿಂತ ಬಗ್ಗೆ ದೂರುಗಳು ಬಂದಿದ್ದವು. ಮಳೆ ನಿಂತ ಕೆಲವೇ ಗಂಟೆಗಳಲ್ಲಿ ನೀರು ಹರಿದುಹೋಗಿದೆ.ಇದನ್ನು ಹೊರತು ಪಡಿಸಿ ಯಾವುದೇ ಹಾನಿ ಸಂಭವಿಸಿದಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದಲ್ಲಿ ಕೆಲ ದಿನಗಳಿಂದ ತಾಪಮಾನ ಹೆಚ್ಚಾಗಿದ್ದು, ಇದರ ನಡುವೆಯೇ ಶುಕ್ರವಾರ ಸಂಜೆ ಮಳೆ ಸುರಿದು ತಂಪೆರೆಯಿತು.</p>.<p>ಸಂಪಂಗಿರಾಮನಗರ, ಶಾಂತಿನಗರ, ಗಾಂಧಿನಗರ, ಎಂ.ಜಿ.ರಸ್ತೆ, ಇಂದಿರಾನಗರ, ಹಲಸೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ತುಂತುರು ಮಳೆ ಆಯಿತು.</p>.<p>ಬಳ್ಳಾರಿ ರಸ್ತೆಯಲ್ಲಿರುವ ಪ್ರದೇಶಗಳಲ್ಲಿ ಜೋರು ಮಳೆ ಸುರಿಯಿತು. ಬ್ಯಾಟರಾಯನಪುರ ಮೇಲ್ಸೇತುವೆಯಲ್ಲೇ ನೀರು ಹರಿಯಿತು. ನೀರಿನಲ್ಲೇ ವಾಹನಗಳು ಸಂಚರಿಸಿದವು. ಸಂಚಾರ ಪೊಲೀಸರೇ ಮೇಲ್ಸೇತುವೆಯಲ್ಲಿ ನೀರು ಹೋಗಲು ಜಾಗ ಮಾಡಿದರು. ಕೆಲ ಗಂಟೆಗಳ ಬಳಿಕವೇ ಮೇಲ್ಸೇತುವೆ ಯಥಾಸ್ಥಿತಿಗೆ ಬಂತು.</p>.<p>ಬೆಳಿಗ್ಗೆಯಿಂದಲೇನಗರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣದೊಂದಿಗೆ ಜೋರು ಗಾಳಿ ಬೀಸಿತು. ನಂತರ, ಜಿನುಗು ಮಳೆ ಶುರುವಾಯಿತು. ಕೆಲವೆಡೆ ಜೋರಾಗಿಯೇ ಸುರಿಯಿತು.</p>.<p>‘ಬ್ಯಾಟರಾಯನಪುರ ಮೇಲ್ಸೇತುವೆ ಸೇರಿ ಕೆಲವೆಡೆ ನೀರು ನಿಂತ ಬಗ್ಗೆ ದೂರುಗಳು ಬಂದಿದ್ದವು. ಮಳೆ ನಿಂತ ಕೆಲವೇ ಗಂಟೆಗಳಲ್ಲಿ ನೀರು ಹರಿದುಹೋಗಿದೆ.ಇದನ್ನು ಹೊರತು ಪಡಿಸಿ ಯಾವುದೇ ಹಾನಿ ಸಂಭವಿಸಿದಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>