<p><strong>ಪುತ್ತೂರು</strong>: ತಾಲ್ಲೂಕಿನಾದ್ಯಂತ ಗುರುವಾರ ನಸುಕಿನ ವೇಳೆ ಅಕಾಲಿಕ ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ಬಳಲುತ್ತಿರುವ ಜನತೆಗೆ ಮಳೆ ಸ್ವಲ್ಪ ಹೊತ್ತು ತಂಪು ನೀಡಿತು. ಅರ್ಧಗಂಟೆ ಸುರಿದ ಮಳೆಯಿಂದ ಗ್ರಾಮೀಣ ಭಾಗದ ರೈತರು ಮಾತ್ರ ಆತಂಕ ಪಡುವಂತಾಯಿತು.</p>.<p>ಗುರುವಾರ 3.30ರ ವೇಳೆಗೆ ಮಂಜಿನ ಹನಿಗಳಂತೆ ಮಳೆ ಬೀಳಲಾರಂಭಿಸಿತು. 5.30ಕ್ಕೆ ಭಾರಿ ಮಳೆ ಸುರಿಯಿತು. ಉಪ್ಪಿನಂಗಡಿಯಲ್ಲೂ ಅರ್ಧಗಂಟೆ ಕಾಲ ಬಿರುಸಿನ ಮಳೆಯಾಗಿದೆ.</p>.<p><strong>ಕೊಡಗಿನಲ್ಲಿ ತುಂತುರು ಮಳೆ(ಮಡಿಕೇರಿ ವರದಿ):</strong> ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಕಕ್ಕಬ್ಬೆ ವ್ಯಾಪ್ತಿಯ ಮರಂದೋಡು, ಪೊದ್ದುಮಾನಿ, ಕೋಕೇರಿ ಸುತ್ತಮುತ್ತ ಮಳೆ ಸುರಿದಿದೆ. ಈ ಸಮಯದಲ್ಲಿ ಬಿರುಸಿನ ಮಳೆಯಾದರೆ ಮಾತ್ರ ಕಾಫಿ ಬೆಳೆಗೆ ಅನುಕೂಲ. ಸಾಧಾರಣ ಮಳೆ ಸುರಿದು ಹೋದರೆ ಮುಂದಿನ ವರ್ಷದ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ತಾಲ್ಲೂಕಿನಾದ್ಯಂತ ಗುರುವಾರ ನಸುಕಿನ ವೇಳೆ ಅಕಾಲಿಕ ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ಬಳಲುತ್ತಿರುವ ಜನತೆಗೆ ಮಳೆ ಸ್ವಲ್ಪ ಹೊತ್ತು ತಂಪು ನೀಡಿತು. ಅರ್ಧಗಂಟೆ ಸುರಿದ ಮಳೆಯಿಂದ ಗ್ರಾಮೀಣ ಭಾಗದ ರೈತರು ಮಾತ್ರ ಆತಂಕ ಪಡುವಂತಾಯಿತು.</p>.<p>ಗುರುವಾರ 3.30ರ ವೇಳೆಗೆ ಮಂಜಿನ ಹನಿಗಳಂತೆ ಮಳೆ ಬೀಳಲಾರಂಭಿಸಿತು. 5.30ಕ್ಕೆ ಭಾರಿ ಮಳೆ ಸುರಿಯಿತು. ಉಪ್ಪಿನಂಗಡಿಯಲ್ಲೂ ಅರ್ಧಗಂಟೆ ಕಾಲ ಬಿರುಸಿನ ಮಳೆಯಾಗಿದೆ.</p>.<p><strong>ಕೊಡಗಿನಲ್ಲಿ ತುಂತುರು ಮಳೆ(ಮಡಿಕೇರಿ ವರದಿ):</strong> ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಕಕ್ಕಬ್ಬೆ ವ್ಯಾಪ್ತಿಯ ಮರಂದೋಡು, ಪೊದ್ದುಮಾನಿ, ಕೋಕೇರಿ ಸುತ್ತಮುತ್ತ ಮಳೆ ಸುರಿದಿದೆ. ಈ ಸಮಯದಲ್ಲಿ ಬಿರುಸಿನ ಮಳೆಯಾದರೆ ಮಾತ್ರ ಕಾಫಿ ಬೆಳೆಗೆ ಅನುಕೂಲ. ಸಾಧಾರಣ ಮಳೆ ಸುರಿದು ಹೋದರೆ ಮುಂದಿನ ವರ್ಷದ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>