ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ 1,500 ಅರ್ಜಿಗಳು ಬಂದಿವೆ.
ಪ್ರಶಸ್ತಿಗೆ ಅರ್ಹರಾದ ಸಂಭಾವ್ಯರ ಹೆಸರುಗಳ ಪಟ್ಟಿಯನ್ನು ಆಯ್ಕೆ ಸಮಿತಿ ಈಗಾಗಲೇ ಸಿದ್ಧಪಡಿಸಿದೆ. ಇದೇ 31ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಪುರಸ್ಕೃತರ ಹೆಸರು ಅಂತಿಮಗೊಳ್ಳಲಿದೆ.
ಪ್ರಶಸ್ತಿಗೆ ಭಾಜನರಾದವರು ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ನಿವಾಸಿಗಳಾಗಿದ್ದರೆ, ಅಂಥವರ ಹೆಸರನ್ನು ನೀತಿಸಂಹಿತೆ ಪಾಲನೆ ಕಾರಣಕ್ಕೆ ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ ಆಯ್ಕೆ ಸಮಿತಿ ಮೂಲಗಳು ತಿಳಿಸಿವೆ.