ಮನುಷ್ಯ ಭೌತಿಕವಾಗಿ ಸಂಪತ್ತು, ಅಧಿಕಾರ ಗಳಿಸಿದ್ದರೂ ಸಂಸ್ಕಾರದ ಕೊರತೆ ಬಹಳಷ್ಟಿದೆ. ಸಂಸ್ಕಾರ, ಸಂಸ್ಕೃತಿ ಇಲ್ಲದ ಕಾರಣ ಕೆಲವರಿಂದ ಅವಘಡಗಳು ಸಂಭವಿಸುತ್ತವೆ. ಈ ನಾಡಿನ ಮಠಾಧೀಶರ ಮೇಲೆ ಬಹಳಷ್ಟು ಜವಾಬ್ದಾರಿಯಿದೆ. ಅದನ್ನು ಅರಿತು ಆಚರಿಸಿ ಬಾಳಿದಾಗ ಸಮಾಜದ ಎಲ್ಲ ರಂಗಗಳಲ್ಲಿ ಉತ್ತಮ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ ಎಂದು ಹೇಳಿದರು.