ನಡು ನೀರಲ್ಲಿ ಕೈಬಿಡಬೇಡಿ:‘ಎಚ್.ವಿಶ್ವನಾಥ್ ಅವರನ್ನು ನಡು ನೀರಿನಲ್ಲಿ ಕೈಬಿಡಬೇಡಿ’ ಎಂದು ಮಾಜಿ ಸಚಿವ ಆರ್.ಶಂಕರ್ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ. ‘ವಿಶ್ವನಾಥ್ ಅವರು ನನ್ನ ರಾಜಕೀಯ ಗುರುಗಳು. ಜೆಡಿಎಸ್ ಬಿಟ್ಟು ಹೊರಬಂದಾಗಲೇ ಬಿಜೆಪಿ ಸರ್ಕಾರದ ರಚನೆಗೆ ಶಕ್ತಿ ಬಂದಿದ್ದು. ಅವರಿಗೆ ವಯಸ್ಸಾಗಿದೆ, ಅವಕಾಶಗಳೂ ಕಡಿಮೆ. ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಅವಕಾಶವಿದೆ’ ಎಂದು ಆರ್. ಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.