<p><strong>ಬೆಂಗಳೂರು</strong>: ಕ್ರಯ ಒಪ್ಪಂದವನ್ನು (ಸೇಲ್ ಅಗ್ರಿಮೆಂಟ್) ಕಾನೂನು ಬದ್ಧಗೊಳಿಸುವ ಮೂಲಕ ಫ್ಲಾಟ್/ನಿವೇಶನ ಖರೀದಿದಾರರಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ‘ಕರ್ನಾಟಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ತಂದಿದೆ.</p>.<p>ಛಾಪಾ ಕಾಗದದ ಮೇಲೆ ಮಾಡಿಕೊಂಡ ‘ಕ್ರಯ ಒಪ್ಪಂದ’ವನ್ನು ಇಲ್ಲಿಯವರೆಗೆ ಕಾನೂನು ಬದ್ಧ ದಾಖಲೆ ಎಂದು ಸರ್ಕಾರ ಪರಿಗಣಿಸುತ್ತಿರಲಿಲ್ಲ.</p>.<p>ಇನ್ನು ಕ್ರಯ ಒಪ್ಪಂದಕ್ಕೆ ಸರ್ಕಾರವೇ ನಿಗದಿತ ಅರ್ಜಿ ನಮೂನೆಯನ್ನು ಒದಗಿಸುತ್ತದೆ. ಅದರಲ್ಲೇ ಒಪ್ಪಂದ ಮಾಡಿಕೊಳ್ಳಬೇಕು. ಆಗ ಮಾತ್ರ ಕಾನೂನಿನ ಮಾನ್ಯತೆ ಸಿಗುತ್ತದೆ. ಇದರಿಂದಾಗಿ ಮಾರಾಟ ಒಪ್ಪಂದದಲ್ಲಿರುವ ಅಂಶಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಉಲ್ಲಂಘಿಸಿ ಮೋಸ ಮಾಡಲು ಸಾಧ್ಯವಾಗದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ತಿದ್ದುಪಡಿಯಿಂದ ಮಾರಾಟಗಾರ, ಖರೀದಿದಾರ ಇಬ್ಬರಿಗೂ ಅನುಕೂಲ. ಯಾರೂ ಒಪ್ಪಂದವನ್ನು ಉಲ್ಲಂಘಿಸಲಾಗದು. ಮಾರಾಟ ಒಪ್ಪಂದವನ್ನೂ ನೋಂದಣಿ ಮಾಡಿಸಿಕೊಳ್ಳಬೇಕಾಗಬಹುದು’ ಎಂದು ಕ್ರೆಡಾಯ್ ಪ್ರತಿನಿಧಿ ಶಂಕರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕ್ರಯ ಒಪ್ಪಂದವನ್ನು (ಸೇಲ್ ಅಗ್ರಿಮೆಂಟ್) ಕಾನೂನು ಬದ್ಧಗೊಳಿಸುವ ಮೂಲಕ ಫ್ಲಾಟ್/ನಿವೇಶನ ಖರೀದಿದಾರರಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ‘ಕರ್ನಾಟಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ತಂದಿದೆ.</p>.<p>ಛಾಪಾ ಕಾಗದದ ಮೇಲೆ ಮಾಡಿಕೊಂಡ ‘ಕ್ರಯ ಒಪ್ಪಂದ’ವನ್ನು ಇಲ್ಲಿಯವರೆಗೆ ಕಾನೂನು ಬದ್ಧ ದಾಖಲೆ ಎಂದು ಸರ್ಕಾರ ಪರಿಗಣಿಸುತ್ತಿರಲಿಲ್ಲ.</p>.<p>ಇನ್ನು ಕ್ರಯ ಒಪ್ಪಂದಕ್ಕೆ ಸರ್ಕಾರವೇ ನಿಗದಿತ ಅರ್ಜಿ ನಮೂನೆಯನ್ನು ಒದಗಿಸುತ್ತದೆ. ಅದರಲ್ಲೇ ಒಪ್ಪಂದ ಮಾಡಿಕೊಳ್ಳಬೇಕು. ಆಗ ಮಾತ್ರ ಕಾನೂನಿನ ಮಾನ್ಯತೆ ಸಿಗುತ್ತದೆ. ಇದರಿಂದಾಗಿ ಮಾರಾಟ ಒಪ್ಪಂದದಲ್ಲಿರುವ ಅಂಶಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಉಲ್ಲಂಘಿಸಿ ಮೋಸ ಮಾಡಲು ಸಾಧ್ಯವಾಗದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ತಿದ್ದುಪಡಿಯಿಂದ ಮಾರಾಟಗಾರ, ಖರೀದಿದಾರ ಇಬ್ಬರಿಗೂ ಅನುಕೂಲ. ಯಾರೂ ಒಪ್ಪಂದವನ್ನು ಉಲ್ಲಂಘಿಸಲಾಗದು. ಮಾರಾಟ ಒಪ್ಪಂದವನ್ನೂ ನೋಂದಣಿ ಮಾಡಿಸಿಕೊಳ್ಳಬೇಕಾಗಬಹುದು’ ಎಂದು ಕ್ರೆಡಾಯ್ ಪ್ರತಿನಿಧಿ ಶಂಕರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>