ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಅನುಷ್ಠಾನ ವಿಚಾರದಲ್ಲಿ ತೊಡಕು ನಿವಾರಿಸುವ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ದ್ವಿತೀಯ ಭಾಷೆಯಾಗಿ ಕನ್ನಡದ ಜತಗೆ ಇನ್ನೊಂದು ಭಾಷೆಯನ್ನು ಕಲಿಸಬೇಕಾಗಿದೆ.ರ್ಈ ವರ್ಷ ಪಠ್ಯಪುಸ್ತಕಗಳನ್ನೂ ಸರಿಯಾಗಿ ಪೂರೈಸಿಲ್ಲ ಎಂದ ಅವರು, 1 ಮತ್ತು 2ನೇ ತರಗತಿಗೆ ಹೋಂ ವರ್ಕ್ ಬೇಡ ಎನ್ನುವುದು, ಶಾಲಾ ಬ್ಯಾಗ್ ತೂಕ ಇಳಿಸುವಂತಹ ವಿಚಾರಗಳಲ್ಲಿ ಕೆಲವು ವ್ಯಕ್ತಿಗಳ ಮನವೊಲಿಕೆಗಾಗಿ ಆದೇಶಗಳನ್ನು ಹೊರಡಿಸಲಾಗುತ್ತಿದೆ. ಶಾಲೆಗಳ ಮಾನ್ಯತೆ ರದ್ದುಪಡಿಸುವ ಬೆದರಿಕೆ ಒಡ್ಡುವುದು ಸರ್ವಾಧಿಕಾರಿ ಧೋರಣೆ ಎಂದರು.