ಬೆಳಗಾವಿ: ‘ಜಿಲ್ಲಾ ಕಾಂಗ್ರೆಸ್ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ನಾವೇ ಇತ್ಯರ್ಥಪಡಿಸಿಕೊಳ್ಳುತ್ತೇವೆ. ಯಾರೂ ಮಧ್ಯ ಪ್ರವೇಶಿಸಬೇಕಿಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿಪಕ್ಷದ ವರಿಷ್ಠರಿಗೆ ಟಾಂಗ್ ನೀಡಿದರು.
ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಸಮ್ಮುಖದಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆದ ಸಭೆಯಿಂದ ದೂರ ಉಳಿದಿದ್ದ ಅವರು, ‘ಶೀಘ್ರವೇ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸುತ್ತೇನೆ. ಸಚಿವ ಡಿ.ಕೆ. ಶಿವಕುಮಾರ್ ನಮ್ಮ ನಡುವೆ ಬರಬೇಕಿಲ್ಲ’ ಎಂದರು.
‘ಪಕ್ಷದಲ್ಲಿ, ಎಲ್ಲ ಜಿಲ್ಲೆಯಲ್ಲೂ ಎರಡರಿಂದ ಮೂರು ಗುಂಪುಗಳಿವೆ.ಪಿಎಲ್ಡಿ ಬ್ಯಾಂಕ್ ಚುನಾವಣೆ ಸ್ಥಳೀಯ ವಿಷಯ. ಅದನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ’ ಎಂದರು. ‘ಪಕ್ಷ ಬಿಡುವ ಯೋಚನೆ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.