ಕಿಕ್ಕೇರಿ ಸಮೀಪದ ಹುಳಿ ಗಂಗನಹಳ್ಳಿ ಗ್ರಾಮದಲ್ಲಿ ಜಾನುವಾರು ಮೈತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಮೃತರು ಗ್ರಾಮದ ಸ್ವಾಮಿಗೌಡರ ಪುತ್ರ ಅಭಿಷೇಕ್ (15) ಹಾಗೂ ಇವರ ಸೋದರ ಮಾವ ಆದಿಹಳ್ಳಿ ಗ್ರಾಮದ ಕುಮಾರ್ (25).ಕೊರಟಿಕೆರೆ ಗ್ರಾಮದ ಚನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಯಾದ ಅಭಿಷೇಕ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿತ್ತು.