ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, ‘ವಯಸ್ಸಾಗಿರುವುದರಿಂದ ಓಡಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಸ್ಪರ್ಧಿಸುವುದರಿಂದ ಹಿಂದೆ ಸರಿದೆ. ಮಂತ್ರಿಗಿರಿ ಕೊಡಬೇಕಾಗಿದ್ದಾಗ ವಯಸ್ಸಾಗಿದೆ ಎನ್ನುತ್ತಿದ್ದರು; ಈಗ ನೋಡಿದರೆ ವಯಸ್ಸಾದ ನನಗೆ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಸ್ಪರ್ಧಿಸುವುದು ಬೇಡ ಎಂದುಕೊಂಡಿದ್ದೇನೆ. ಎಸ್.ಎಸ್. ಮಲ್ಲಿಕಾರ್ಜುನನೂ ನಿಲ್ಲುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.