<p><strong>ಕೌಜಲಗಿ:</strong> ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಮಲ್ಲಪ್ಪ ಈಟಿ ಅವರು ಶಾಲೆಗೆ ಟೇಬಲ್ ಸೇರಿದಿಂತೆ ₹ 6ಸಾವಿರ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ನೀಡಿ ಮಂಗಳವಾರ ತಮ್ಮ ಜನ್ಮ ದಿನವನ್ನು ಮಾದರಿಯಾಗಿ ಆಚರಿಸಿಕೊಂಡಿದ್ದಾರೆ.</p>.<p>ಗೋಕಾಕ ತಾಲ್ಲೂಕಿನ ಮರಡಿಶಿವಾಪುರ ಕೃಷಿಕರಾದ ಮಲ್ಲಪ್ಪ-ಮಂಜುಳಾ ದಂಪತಿ ಪುತ್ರಿ ಇವರು. ಹೋದ ವರ್ಷ ಜನ್ಮ ದಿನದಂದು ₹ 3 ಸಾವಿರ ಮೌಲ್ಯದ ಊಟದ ತಟ್ಟೆಗಳನ್ನು ದೇಣಿಗೆ ನೀಡಿದ್ದರು.</p>.<p>ಪ್ರತಿಯಾಗಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಮಹಾಲಕ್ಷ್ಮಿ ಜನ್ಮ ದಿನವನ್ನು ಆಚರಿಸಿ ಶುಭಾಶಯ ಕೋರಿದರು. ಸಿಹಿ ಹಂಚಿದರು.</p>.<p>‘ಜನ್ಮ ದಿನದಂದು ವಿದ್ಯಾರ್ಥಿನಿಯೊಬ್ಬರು ಶಾಲೆಗೆ ದೇಣಿಗೆ ನೀಡುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ’ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ಹೇಳಿದರು.</p>.<p>ಶಿಕ್ಷಕರಾದ ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ವಿ.ಬಿ. ಬಿರಾದಾರ, ಶುಭಾ.ಬಿ., ರಾಕೇಶ ನಡೋಣಿ, ಪ್ರಕಾಶ ಮುರಕಟ್ನಾಳ, ಬಾಳೇಶ ಕೂಟೂರ, ರೂಪಾ ಖನಗಾವಿ, ಗಣಪತಿ ಭಾಗೋಜಿ, ಮಲ್ಹಾರಿ ಪೋಳ, ಎಸ್ಡಿಎಂಸಿ ಅಧ್ಯಕ್ಷ ಕುತುಬು ಮಿರ್ಜಾ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೌಜಲಗಿ:</strong> ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಮಲ್ಲಪ್ಪ ಈಟಿ ಅವರು ಶಾಲೆಗೆ ಟೇಬಲ್ ಸೇರಿದಿಂತೆ ₹ 6ಸಾವಿರ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ನೀಡಿ ಮಂಗಳವಾರ ತಮ್ಮ ಜನ್ಮ ದಿನವನ್ನು ಮಾದರಿಯಾಗಿ ಆಚರಿಸಿಕೊಂಡಿದ್ದಾರೆ.</p>.<p>ಗೋಕಾಕ ತಾಲ್ಲೂಕಿನ ಮರಡಿಶಿವಾಪುರ ಕೃಷಿಕರಾದ ಮಲ್ಲಪ್ಪ-ಮಂಜುಳಾ ದಂಪತಿ ಪುತ್ರಿ ಇವರು. ಹೋದ ವರ್ಷ ಜನ್ಮ ದಿನದಂದು ₹ 3 ಸಾವಿರ ಮೌಲ್ಯದ ಊಟದ ತಟ್ಟೆಗಳನ್ನು ದೇಣಿಗೆ ನೀಡಿದ್ದರು.</p>.<p>ಪ್ರತಿಯಾಗಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಮಹಾಲಕ್ಷ್ಮಿ ಜನ್ಮ ದಿನವನ್ನು ಆಚರಿಸಿ ಶುಭಾಶಯ ಕೋರಿದರು. ಸಿಹಿ ಹಂಚಿದರು.</p>.<p>‘ಜನ್ಮ ದಿನದಂದು ವಿದ್ಯಾರ್ಥಿನಿಯೊಬ್ಬರು ಶಾಲೆಗೆ ದೇಣಿಗೆ ನೀಡುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ’ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ಹೇಳಿದರು.</p>.<p>ಶಿಕ್ಷಕರಾದ ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ವಿ.ಬಿ. ಬಿರಾದಾರ, ಶುಭಾ.ಬಿ., ರಾಕೇಶ ನಡೋಣಿ, ಪ್ರಕಾಶ ಮುರಕಟ್ನಾಳ, ಬಾಳೇಶ ಕೂಟೂರ, ರೂಪಾ ಖನಗಾವಿ, ಗಣಪತಿ ಭಾಗೋಜಿ, ಮಲ್ಹಾರಿ ಪೋಳ, ಎಸ್ಡಿಎಂಸಿ ಅಧ್ಯಕ್ಷ ಕುತುಬು ಮಿರ್ಜಾ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>