ತುಮಕೂರು: ಅಂತಿಮ ದರ್ಶನಕ್ಕೆ ಬಂದ ಭಕ್ತರಿಗೆ ಕ್ಯಾತ್ಸಂದ್ರದ ಚಂದ್ರಮೌಳೇಶ್ವರಿ ಬಡಾವಣೆಯ ಬಳಿ ಮುಸ್ಲಿಂ ಸಮುದಾಯದವರು ಕುಡಿಯುವ ನೀರು ವಿತರಿಸಿದರು.
ಮಂಡಿಪೇಟೆಯಲ್ಲಿ ಮುಸ್ಲಿಮರು ಊಟದ ವ್ಯವಸ್ಥೆ ಮಾಡಿದ್ದರು. ದಾರಿಯಲ್ಲಿ ಹೋಗುತ್ತಿದ್ದವರನ್ನು ಕರೆದು ಊಟ ಬಡಿಸಿದರು. ಸಿಎಸ್ಐ ಚರ್ಚ್ ಎದುರು ಶಿವಕುಮಾರ ಭಾವಚಿತ್ರವನ್ನಿಟ್ಟು ಕ್ರೈಸ್ತರು ಗೌರವ ಸಲ್ಲಿಸಿದರು.
ಮಠದಲ್ಲಿ ವ್ಯಾಸಂಗ ಮಾಡಿದ ರಾಜ್ಯದ ನಾನಾ ಭಾಗಗಳ ಮುಸ್ಲಿಮ್ ವಿದ್ಯಾರ್ಥಿಗಳು ಶ್ರೀಗಳ ಅಂತಿಮ ದರ್ಶನಕ್ಕೆ ಬಂದಿದ್ದರು. ಮಠದ ಆವರಣದಲ್ಲಿ ಕೆಲಸ ಕಾರ್ಯಗಳಲ್ಲಿಯೂ ತೊಡಗಿದ್ದರು.