ನೆರೆ ಹಾವಳಿಯಿಂದ ಜನ ತತ್ತರಿಸುತ್ತಿರುವಾಗ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಅನಾಥ ಸ್ಥಿತಿ ನೆಲೆಸಿತ್ತು. ಜನತೆ ನೆರೆ ನೀರಲ್ಲಿ ಮುಳುಗುತ್ತಿದ್ದರೆ ಮುಖ್ಯಮಂತ್ರಿಯವರು ಆಪರೇಷನ್ ಕಮಲದಲ್ಲಿ ಮುಳುಗಿದ್ದರು. ಸಚಿವರಂತೂ ಇರಲೇ ಇಲ್ಲ, ಬಿಜೆಪಿಯ ಶಾಸಕರು ಮತ್ತು ಸಂಸದರೂ ಕೂಡಾ ನೆರೆ ಸಂತ್ರಸ್ತರ ಕಡೆ ತಲೆ ಹಾಕಲಿಲ್ಲ ಎಂದು ದೂರಿದ್ದಾರೆ.