<p><strong>ಮೈಸೂರು:</strong> ‘ಗೋಡ್ಸೆ, ಸಾವರ್ಕರ್ ಪೂಜಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ದೇಶಭಕ್ತಿಯ ಪಾಠವನ್ನು ಇಂಥವರಿಂದ ಹೇಳಿಸಿಕೊಳ್ಳಬೇಕಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಇಲ್ಲಿ ಕಿಡಿಕಾರಿದರು.</p>.<p>ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥವಾಗುವುದಿಲ್ಲ. ಅನಂತಕುಮಾರ ಹೆಗಡೆಗೆ ವಯಸ್ಸೆಷ್ಟು? ಇವನು ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದನಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು?’ ಎಂದು ಹರಿಹಾಯ್ದರು.</p>.<p>‘ಜಗತ್ತಿನಲ್ಲಿ, ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಪಡೆದ ದೇಶ ಭಾರತ. ಇತಿಹಾಸ ಗೊತ್ತಿಲ್ಲದಿದ್ದರೆ, ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಿದ್ದರು. ಇದು ಅವನಿಗೆ ಗೊತ್ತಾ ? ಆದರೆ ಇಂದು ಅವರೇ ಸರ್ದಾರರ ಬೃಹತ್ ಮೂರ್ತಿ ನಿರ್ಮಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.</p>.<p class="Subhead"><strong>ದುಡ್ಡು ತೆಗೆದುಕೊಂಡಿದ್ದನ್ನೂ ಬರೆಯಲಿ: </strong>‘ಎಚ್.ವಿಶ್ವನಾಥ್ ದೊಡ್ಡ ಬರಹಗಾರರು. ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೆಯಲಿ. ನಾವೂ ಓದೋಣ’ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ‘ಅವರು ದುಡ್ಡು ತೆಗೆದುಕೊಂಡಿದ್ದನ್ನೂ ಅದರಲ್ಲಿ ಬರೆಯಲಿ’ ಎಂದು ಕುಟುಕಿದರು.</p>.<p>ಪಕ್ಷಾಂತರಿಗಳಿಗೆ ಹಂಗೇ ಆಗಬೇಕು. ನನ್ನ ಪ್ರಕಾರ, ಅವರು ಅತಂತ್ರರಾಗಿರೋದು ಸರಿಯಾಗಿದೆ. ಪಕ್ಷದ್ರೋಹಿಗಳಿಗೆ ತಕ್ಕ ಪಾಠವಾಗುತ್ತಿದೆ</p>.<p><strong>- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಗೋಡ್ಸೆ, ಸಾವರ್ಕರ್ ಪೂಜಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ದೇಶಭಕ್ತಿಯ ಪಾಠವನ್ನು ಇಂಥವರಿಂದ ಹೇಳಿಸಿಕೊಳ್ಳಬೇಕಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಇಲ್ಲಿ ಕಿಡಿಕಾರಿದರು.</p>.<p>ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥವಾಗುವುದಿಲ್ಲ. ಅನಂತಕುಮಾರ ಹೆಗಡೆಗೆ ವಯಸ್ಸೆಷ್ಟು? ಇವನು ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದನಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು?’ ಎಂದು ಹರಿಹಾಯ್ದರು.</p>.<p>‘ಜಗತ್ತಿನಲ್ಲಿ, ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಪಡೆದ ದೇಶ ಭಾರತ. ಇತಿಹಾಸ ಗೊತ್ತಿಲ್ಲದಿದ್ದರೆ, ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಿದ್ದರು. ಇದು ಅವನಿಗೆ ಗೊತ್ತಾ ? ಆದರೆ ಇಂದು ಅವರೇ ಸರ್ದಾರರ ಬೃಹತ್ ಮೂರ್ತಿ ನಿರ್ಮಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.</p>.<p class="Subhead"><strong>ದುಡ್ಡು ತೆಗೆದುಕೊಂಡಿದ್ದನ್ನೂ ಬರೆಯಲಿ: </strong>‘ಎಚ್.ವಿಶ್ವನಾಥ್ ದೊಡ್ಡ ಬರಹಗಾರರು. ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೆಯಲಿ. ನಾವೂ ಓದೋಣ’ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ‘ಅವರು ದುಡ್ಡು ತೆಗೆದುಕೊಂಡಿದ್ದನ್ನೂ ಅದರಲ್ಲಿ ಬರೆಯಲಿ’ ಎಂದು ಕುಟುಕಿದರು.</p>.<p>ಪಕ್ಷಾಂತರಿಗಳಿಗೆ ಹಂಗೇ ಆಗಬೇಕು. ನನ್ನ ಪ್ರಕಾರ, ಅವರು ಅತಂತ್ರರಾಗಿರೋದು ಸರಿಯಾಗಿದೆ. ಪಕ್ಷದ್ರೋಹಿಗಳಿಗೆ ತಕ್ಕ ಪಾಠವಾಗುತ್ತಿದೆ</p>.<p><strong>- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>