<p><strong>ತುಮಕೂರು:</strong>ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ಹೊರಟಿದ್ದೇವೆ. ಸಿದ್ಧರಾಮಯ್ಯ ಅಥವಾ ಖರ್ಗೆಯವರು ಮುಖ್ಯಮಂತ್ರಿ ಆದರೆ ಈ ಸರ್ಕಾರ ಉಳಿಯುತ್ತೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಹೇಳಿದರು.</p>.<p>ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಮುನಿರತ್ನ, ರಾಮಲಿಂಗಾರೆಡ್ಡಿ ಸೇರಿದಂತೆ ಕೆಲವರು ಮುಂಬೈಗೆ ಹೊರಟಿದ್ದೇವೆ. ಅತೃಪ್ತ ಶಾಸಕರನ್ನು ಕರೆದುಕೊಂಡು ಬಂದು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.</p>.<p>‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕು ಎಂಬುದಾದರೆ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಖರ್ಗೆಯವರು ಮುಖ್ಯಮಂತ್ರಿ ಆಗಲು ಯಾರಆಕ್ಷೇಪವೂ ಇಲ್ಲ. ಹಿರಿಯ ಮನುಷ್ಯ ಅವರೂ ಆಗಲಿ. ಇಲ್ಲದೇ ಇದ್ದರೆ ನಾಲ್ಕೈದು ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ’ ಎಂದು ಎಚ್ಚರಿಸಿದರು.</p>.<p>‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ಚಿಂತನೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ಮಾಡಿದ್ದಾರಂತಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ದೇವೇಗೌಡರು ಹೇಳಿದರೆ ಎಲ್ಲವೂ ಆಗಿಬಿಡುತ್ತಾ. ಅವರು ಹೇಳಿದ್ದು ಭಗವದ್ಗೀತೇನಾ? ಅವರು ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರೆಯೇ ಎಂದು ವಾಗ್ದಾಳಿ ನಡೆಸಿದರು.</p>.<p><strong>ಪರಮೇಶ್ವರ ಮೇಲೆ ಪರೋಕ್ಷ ವಾಗ್ದಾಳಿ</strong></p>.<p>ಮುಂಬೈಗೆ ಹೋಗಿರುವ ಶಾಸಕರ ಮನವೊಲಿಸಿ ಕರೆತಂದು ಜೀರೊ ಟ್ರಾಫಿಕ್ ( ಡಾ.ಪರಮೇಶ್ವರ ಅವರನ್ನು ಈಚೆಗೆ ರಾಜಣ್ಣ ಕರೆಯೋದು ಹೀಗೆ) ಅವೂ ಇವು ಎಲ್ಲಾ ಕಂಟಿನ್ಯೂ ಆಗೋ ರೀತಿ ವ್ಯವಸ್ಥೆ ಮಾಡಬೇಕು ಅಂಥಾ ಪ್ರಯತ್ನ ಮಾಡ್ತಿದ್ದೀವಿ ಎಂದು ಕೆ.ಎನ್ರಾಜಣ್ಣ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಯಾಕೆ, ಜೀರೋ ಟ್ರಾಫಿಕ್ ಕಂಟಿನ್ಯೂ ಆಗೋದು ಅಷ್ಟೊಂದು ಇಷ್ಟಾನಾ ನಿಮ್ಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ ಹೌದು ಜೀರೊ ಟ್ರಾಫಿಕ್ ಉಳಿಬೇಕು. ಯಾಕಂದ್ರೆಜನ ಮುಖಕ್ಕೆ ಉಗೀತಾರಲ್ಲ. ಅದಿನ್ನೂ ಕಂಟಿನ್ಯೂ ಆಗ್ಲಿ ಅನ್ನೋ ಆಸೆ ಎಂದರು.</p>.<p>ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ರಾಜಣ್ಣ ಅವರು ಡಾ.ಪರಮೇಶ್ವರ ಅವರನ್ನು ಜೀರೊ ಟ್ರಾಫಿಕ್ ಎಂದು ಕರೆದಿದ್ದರು.<br />ಬೆಂಗಳೂರಿಂದ ತುಮಕೂರಿಗೆ ಒಮ್ಮೆ ಜೀರೊ ಟ್ರಾಫಿಕ್ ಬಂದು ಹೋದರೆ 500 ವೋಟ್ ಹೋಗುತ್ತವೆ ಎಂದು ಹೇಳಿದ್ದರು.</p>.<p>ಈ ಹೇಳಿಕೆಗೆ ತುಮಕೂರು ಜಿಲ್ಲೆಯಲ್ಲಿನ ಪರಮೇಶ್ವರ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಮತ್ತೆ ಆ ಪದ ಬಳಸಿ ವಾಗ್ದಾಳಿ ನಡೆಸಿದ್ದಾರೆ.</p>.<p><strong>ಆಪರೇಷನ್ ಕಮಲ ಅಲ್ಲ:</strong> ಇದು ಆಪರೇಷನ್ ಕಮಲ ಅಲ್ಲ. ಸಚಿವರ ಮೇಲಿನ ಅಸಮಾಧಾನ, ಸರ್ಕಾರದ ಮೇಲಿನ ಬೇಸರಕ್ಕೆ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಶಾಸಕರಿಂದಲೇ ಇವರು ಸಚಿವರಾಗಿರೋದು. ಅದನ್ನು ಮರೆತು ಬರೀ ವ್ಯವಹಾರ ಮಾಡಿಕೊಂಡು ಕುಳಿತು ಶಾಸಕರನ್ನು ಮರೆತರೆ ಏನ್ಮಾಡ್ತಾರೆ ಎಂದು ಹೇಳಿದರು.</p>.<p>ಇಂದೂ ಕೂಡಾ ರಾಮಲಿಂಗಾರೆಡ್ಡಿ ಮಗಳು ಸೌಮ್ಯಾರೆಡ್ಡಿ ಸೇರಿದಂತೆ ನಾಲ್ಕೈದು ಶಾಸಕರು ರಾಜೀನಾಮೆ ಕೊಡುವವರಿದ್ದಾರೆ. ಅವರನ್ನು ಪಕ್ಷದ ಮುಖಂಡರು ಮನವೊಲಿಸುವ ಪ್ರಯತ್ನ ಮಾಡುತ್ತಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong>ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ಹೊರಟಿದ್ದೇವೆ. ಸಿದ್ಧರಾಮಯ್ಯ ಅಥವಾ ಖರ್ಗೆಯವರು ಮುಖ್ಯಮಂತ್ರಿ ಆದರೆ ಈ ಸರ್ಕಾರ ಉಳಿಯುತ್ತೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಹೇಳಿದರು.</p>.<p>ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಮುನಿರತ್ನ, ರಾಮಲಿಂಗಾರೆಡ್ಡಿ ಸೇರಿದಂತೆ ಕೆಲವರು ಮುಂಬೈಗೆ ಹೊರಟಿದ್ದೇವೆ. ಅತೃಪ್ತ ಶಾಸಕರನ್ನು ಕರೆದುಕೊಂಡು ಬಂದು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.</p>.<p>‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕು ಎಂಬುದಾದರೆ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಖರ್ಗೆಯವರು ಮುಖ್ಯಮಂತ್ರಿ ಆಗಲು ಯಾರಆಕ್ಷೇಪವೂ ಇಲ್ಲ. ಹಿರಿಯ ಮನುಷ್ಯ ಅವರೂ ಆಗಲಿ. ಇಲ್ಲದೇ ಇದ್ದರೆ ನಾಲ್ಕೈದು ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ’ ಎಂದು ಎಚ್ಚರಿಸಿದರು.</p>.<p>‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ಚಿಂತನೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ಮಾಡಿದ್ದಾರಂತಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ದೇವೇಗೌಡರು ಹೇಳಿದರೆ ಎಲ್ಲವೂ ಆಗಿಬಿಡುತ್ತಾ. ಅವರು ಹೇಳಿದ್ದು ಭಗವದ್ಗೀತೇನಾ? ಅವರು ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರೆಯೇ ಎಂದು ವಾಗ್ದಾಳಿ ನಡೆಸಿದರು.</p>.<p><strong>ಪರಮೇಶ್ವರ ಮೇಲೆ ಪರೋಕ್ಷ ವಾಗ್ದಾಳಿ</strong></p>.<p>ಮುಂಬೈಗೆ ಹೋಗಿರುವ ಶಾಸಕರ ಮನವೊಲಿಸಿ ಕರೆತಂದು ಜೀರೊ ಟ್ರಾಫಿಕ್ ( ಡಾ.ಪರಮೇಶ್ವರ ಅವರನ್ನು ಈಚೆಗೆ ರಾಜಣ್ಣ ಕರೆಯೋದು ಹೀಗೆ) ಅವೂ ಇವು ಎಲ್ಲಾ ಕಂಟಿನ್ಯೂ ಆಗೋ ರೀತಿ ವ್ಯವಸ್ಥೆ ಮಾಡಬೇಕು ಅಂಥಾ ಪ್ರಯತ್ನ ಮಾಡ್ತಿದ್ದೀವಿ ಎಂದು ಕೆ.ಎನ್ರಾಜಣ್ಣ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಯಾಕೆ, ಜೀರೋ ಟ್ರಾಫಿಕ್ ಕಂಟಿನ್ಯೂ ಆಗೋದು ಅಷ್ಟೊಂದು ಇಷ್ಟಾನಾ ನಿಮ್ಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ ಹೌದು ಜೀರೊ ಟ್ರಾಫಿಕ್ ಉಳಿಬೇಕು. ಯಾಕಂದ್ರೆಜನ ಮುಖಕ್ಕೆ ಉಗೀತಾರಲ್ಲ. ಅದಿನ್ನೂ ಕಂಟಿನ್ಯೂ ಆಗ್ಲಿ ಅನ್ನೋ ಆಸೆ ಎಂದರು.</p>.<p>ಕಳೆದ ಒಂದುವರೆ ತಿಂಗಳ ಹಿಂದೆಯಷ್ಟೇ ರಾಜಣ್ಣ ಅವರು ಡಾ.ಪರಮೇಶ್ವರ ಅವರನ್ನು ಜೀರೊ ಟ್ರಾಫಿಕ್ ಎಂದು ಕರೆದಿದ್ದರು.<br />ಬೆಂಗಳೂರಿಂದ ತುಮಕೂರಿಗೆ ಒಮ್ಮೆ ಜೀರೊ ಟ್ರಾಫಿಕ್ ಬಂದು ಹೋದರೆ 500 ವೋಟ್ ಹೋಗುತ್ತವೆ ಎಂದು ಹೇಳಿದ್ದರು.</p>.<p>ಈ ಹೇಳಿಕೆಗೆ ತುಮಕೂರು ಜಿಲ್ಲೆಯಲ್ಲಿನ ಪರಮೇಶ್ವರ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಮತ್ತೆ ಆ ಪದ ಬಳಸಿ ವಾಗ್ದಾಳಿ ನಡೆಸಿದ್ದಾರೆ.</p>.<p><strong>ಆಪರೇಷನ್ ಕಮಲ ಅಲ್ಲ:</strong> ಇದು ಆಪರೇಷನ್ ಕಮಲ ಅಲ್ಲ. ಸಚಿವರ ಮೇಲಿನ ಅಸಮಾಧಾನ, ಸರ್ಕಾರದ ಮೇಲಿನ ಬೇಸರಕ್ಕೆ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಶಾಸಕರಿಂದಲೇ ಇವರು ಸಚಿವರಾಗಿರೋದು. ಅದನ್ನು ಮರೆತು ಬರೀ ವ್ಯವಹಾರ ಮಾಡಿಕೊಂಡು ಕುಳಿತು ಶಾಸಕರನ್ನು ಮರೆತರೆ ಏನ್ಮಾಡ್ತಾರೆ ಎಂದು ಹೇಳಿದರು.</p>.<p>ಇಂದೂ ಕೂಡಾ ರಾಮಲಿಂಗಾರೆಡ್ಡಿ ಮಗಳು ಸೌಮ್ಯಾರೆಡ್ಡಿ ಸೇರಿದಂತೆ ನಾಲ್ಕೈದು ಶಾಸಕರು ರಾಜೀನಾಮೆ ಕೊಡುವವರಿದ್ದಾರೆ. ಅವರನ್ನು ಪಕ್ಷದ ಮುಖಂಡರು ಮನವೊಲಿಸುವ ಪ್ರಯತ್ನ ಮಾಡುತ್ತಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>