ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿ ನಿಸ್ವಾರ್ಥ ಸೇವೆ ಮಾಡಿರುವ ಹೇಮಂತ ಕರ್ಕರೆ ಅವರು ಉಗ್ರವಾದಿಗಳ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದಾರೆ. ಆದರೆ, ಪ್ರಜ್ಞಾ ಠಾಕೂರ್ ಅವರು ಹೇಮಂತ ಕರ್ಕರೆ ಸತ್ತಿದ್ದು ತನ್ನ ಶಾಪದಿಂದ ಎಂದು ಹೇಳುತ್ತಾರೆ. ಅವರನ್ನು ಟೀಕಿಸುವ ನೈತಿಕ ಹಕ್ಕು, ಜಾಮೀನಿನ ಮೇಲೆ ಹೊರಬಂದಿರುವ ಪ್ರಜ್ಞಾ ಅವರಿಗಿಲ್ಲ’ ಎಂದರು.