<p><strong>ಮಂಡ್ಯ: </strong>ನಾಗಮಂಗಲ ತಾಲ್ಲೂಕು ಬಂಕಾಪುರ ಸಮೀಪ ಭಾನುವಾರ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಪ್ರಯಾಣಿಸುತ್ತಿದ್ದ ಕಾರಿನ ಸಮೀಪವೇ ಕಲ್ಲು ಬಂಡೆ ಸ್ಫೋಟಗೊಂಡಿದೆ. ಸಚಿವರು ಅಪಾಯದಿಂದ ಪಾರಾಗಿದ್ದಾರೆ.</p>.<p>ಬೆಂಗಳೂರು–ಜಲಸೂರು ಹೆದ್ದಾರಿ ಮೂಲಕ ಸಚಿವರು ಕೆ.ಆರ್.ಪೇಟೆಗೆ ಬರುವಾಗ ಘಟನೆ ನಡೆದಿದೆ. ಹೆದ್ದಾರಿ ಕಾಮಗಾರಿಗಾಗಿ ಕಲ್ಲು ಬಂಡೆ ಸ್ಫೋಟ ಮಾಡಲಾಗುತ್ತಿತ್ತು. ಸ್ಫೋಟಕ್ಕೂ ಮೊದಲು ಮುನ್ಸೂಚನೆ ನೀಡದೆ, ರಸ್ತೆ ಸಂಚಾರ ಬಂದ್ ಮಾಡದೆ ನಿರ್ಲಕ್ಷ್ಯ ವಹಿಸಲಾಗಿತ್ತು.</p>.<p>ರಸ್ತೆ ಬದಿಯ ಕಲ್ಲು ಬಂಡೆ ಸಿಡಿದು ಸಚಿವರ ಕಾರಿನ ಸಮೀಪವೇ ಬಿದ್ದಿದೆ. ಇದರಿಂದ ಭಯಭೀತರಾದ ಕಾರು ಚಾಲಕ ಸ್ವಲ್ಪದೂರ ಹಿಮ್ಮುಖವಾಗಿ ಚಲಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಸಚಿವರು ಗುತ್ತಿಗೆದಾರ ಶ್ರೀನಿವಾಸ್ ವಿರುದ್ದ ಕೆಂಡಾಮಂಡಲರಾದರು. ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದರು.</p>.<p>‘ರಸ್ತೆ ಕಾಮಗಾರಿ ಅನುಮತಿ ಕುರಿತ ದಾಖಲಾತಿ ಪರಿಶೀಲನೆ ಮಾಡಲಾಗುತ್ತಿದೆ. ನಂತರ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ನಾಗಮಂಗಲ ತಾಲ್ಲೂಕು ಬಂಕಾಪುರ ಸಮೀಪ ಭಾನುವಾರ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಪ್ರಯಾಣಿಸುತ್ತಿದ್ದ ಕಾರಿನ ಸಮೀಪವೇ ಕಲ್ಲು ಬಂಡೆ ಸ್ಫೋಟಗೊಂಡಿದೆ. ಸಚಿವರು ಅಪಾಯದಿಂದ ಪಾರಾಗಿದ್ದಾರೆ.</p>.<p>ಬೆಂಗಳೂರು–ಜಲಸೂರು ಹೆದ್ದಾರಿ ಮೂಲಕ ಸಚಿವರು ಕೆ.ಆರ್.ಪೇಟೆಗೆ ಬರುವಾಗ ಘಟನೆ ನಡೆದಿದೆ. ಹೆದ್ದಾರಿ ಕಾಮಗಾರಿಗಾಗಿ ಕಲ್ಲು ಬಂಡೆ ಸ್ಫೋಟ ಮಾಡಲಾಗುತ್ತಿತ್ತು. ಸ್ಫೋಟಕ್ಕೂ ಮೊದಲು ಮುನ್ಸೂಚನೆ ನೀಡದೆ, ರಸ್ತೆ ಸಂಚಾರ ಬಂದ್ ಮಾಡದೆ ನಿರ್ಲಕ್ಷ್ಯ ವಹಿಸಲಾಗಿತ್ತು.</p>.<p>ರಸ್ತೆ ಬದಿಯ ಕಲ್ಲು ಬಂಡೆ ಸಿಡಿದು ಸಚಿವರ ಕಾರಿನ ಸಮೀಪವೇ ಬಿದ್ದಿದೆ. ಇದರಿಂದ ಭಯಭೀತರಾದ ಕಾರು ಚಾಲಕ ಸ್ವಲ್ಪದೂರ ಹಿಮ್ಮುಖವಾಗಿ ಚಲಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಸಚಿವರು ಗುತ್ತಿಗೆದಾರ ಶ್ರೀನಿವಾಸ್ ವಿರುದ್ದ ಕೆಂಡಾಮಂಡಲರಾದರು. ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದರು.</p>.<p>‘ರಸ್ತೆ ಕಾಮಗಾರಿ ಅನುಮತಿ ಕುರಿತ ದಾಖಲಾತಿ ಪರಿಶೀಲನೆ ಮಾಡಲಾಗುತ್ತಿದೆ. ನಂತರ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>