<p><strong>ಮಂಡ್ಯ:</strong> ನಾಯಿಗಳ ಹಾವಳಿಯಿಂದ ಮುಕ್ತಿ ಪಡೆಯಲು ಹೊಸವಿಧಾನ ಕಂಡುಕೊಂಡಿದ್ದು ನಗರದ ಮನೆ, ಅಂಗಡಿಗಳ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಬಾಟಲಿ, ಕ್ಯಾನ್ನಂತಹ ಪಾರದರ್ಶಕ ವಸ್ತುಗಳಲ್ಲಿ ನೀಲಿ ಬಣ್ಣದ ನೀರು ತುಂಬಿಡುತ್ತಿದ್ದಾರೆ.</p>.<p>ಮನೆ, ಕಚೇರಿ, ಅಂಗಡಿಗಳ ಮುಂದೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಾಯಿಗಳ ನಿಯಂತ್ರಣಕ್ಕೆ ತಾವೇ ಈ ಮಾರ್ಗ ಕಂಡುಕೊಂಡಿದ್ದಾರೆ.</p>.<p>‘ತೆಳು ಹಾಗೂ ಕಡು ನೀಲಿ ದ್ರಾವಣಗಳನ್ನು ಬಾಟಲಿಗಳಲ್ಲಿ ತುಂಬಿಸಿ ಮನೆ, ಅಂಗಡಿಗಳ ಮುಂದೆ ಇಡುವ ಮೂಲಕ ಈ ಸಮಸ್ಯೆ ತಪ್ಪಿದೆ. ನಾಯಿಗಳ ಕಣ್ಣುಗಳು ನೀಲಿ ಬಣ್ಣಕ್ಕೆ ಅಂಜುತ್ತವೆ’ ಎಂಬುದು ಸ್ಥಳೀಯರ ಪ್ರತಿಪಾದನೆ.</p>.<p>ಅಶೋಕ ನಗರ, ಸುಭಾಷನಗರ, ಚಾಮುಂಡೇಶ್ವರ ನಗರ, ಕ್ರಿಶ್ಚಿಯನ್ ಕಾಲೊನಿ, ಆಸ್ಪತ್ರೆ ರಸ್ತೆ, ಶಂಕರಪುರ ಸೇರಿದಂತೆ ಹಲವೆಡೆ ನೀಲಿ ಬಣ್ಣದ ನೀರಿನ ಬಾಟಲಿಗಳನ್ನು ಕಾಣಬಹುದು. ಉಳಿದ ಬಡಾವಣೆಗಳ ಜನರೂ ಅದನ್ನು ಅನುಕರಿಸುತ್ತಿದ್ದಾರೆ.</p>.<p>ಪ್ರಮುಖವಾಗಿ ಮಾಂಸಾಹಾರ ವ್ಯಾಪಾರ ಮಾಡುವವರು ಮೊಬೈಲ್ ಕ್ಯಾಂಟೀನ್ ಸುತ್ತ ಇಂಥ ಬಾಟಲಿಗಳನ್ನು ಇಡುವುದು ಹೆಚ್ಚುತ್ತಿದೆ. ಬಾಟಲಿ ಇಟ್ಟಿರುವ ಪರಿಧಿಯಿಂದ ನಾಯಿಗಳು ಹೊರಗೆ ಇರುತ್ತವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.</p>.<p>ಕಿರಾಣಿ ಅಂಗಡಿಗಳಲ್ಲಿ ಉಜಾಲಾವನ್ನು ನೀರಿಗೆ ಮಿಶ್ರಣ ಮಾಡಿ ಇಡುತ್ತಿದ್ದಾರೆ. ಆದರೆ, ಬೀದಿನಾಯಿಗಳು ಅವುಗಳ ಮುಂದೆಯೇ ಕೂರುವುದು, ಮೂಸಿ ನೋಡುವುದನ್ನು ಮಾಡುತ್ತಿವೆ.</p>.<p>‘ಪಕ್ಕದ ಮನೆಯವರನ್ನು ಅನುಕರಿಸಿ ನನ್ನ ಕಾರಿನ ಮುಂದೆ ಇಂತಹ ನಾಲ್ಕು ಬಾಟಲಿ ಇರಿಸಿದ್ದೆ. ಆದರೆ, ನಾಯಿಗಳು ಕುತೂಹಲದಿಂದ ಬಾಟಲಿ ಬಳಿ ಬರುತ್ತವೆ. ಚಕ್ರಗಳಿಗೆ ಮೂತ್ರ ವಿಸರ್ಜಿಸಿ ಹೋಗುತ್ತಿವೆ. ಏನೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಥಾಮಸ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ನಾಯಿಗಳ ಹಾವಳಿಯಿಂದ ಮುಕ್ತಿ ಪಡೆಯಲು ಹೊಸವಿಧಾನ ಕಂಡುಕೊಂಡಿದ್ದು ನಗರದ ಮನೆ, ಅಂಗಡಿಗಳ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಬಾಟಲಿ, ಕ್ಯಾನ್ನಂತಹ ಪಾರದರ್ಶಕ ವಸ್ತುಗಳಲ್ಲಿ ನೀಲಿ ಬಣ್ಣದ ನೀರು ತುಂಬಿಡುತ್ತಿದ್ದಾರೆ.</p>.<p>ಮನೆ, ಕಚೇರಿ, ಅಂಗಡಿಗಳ ಮುಂದೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಾಯಿಗಳ ನಿಯಂತ್ರಣಕ್ಕೆ ತಾವೇ ಈ ಮಾರ್ಗ ಕಂಡುಕೊಂಡಿದ್ದಾರೆ.</p>.<p>‘ತೆಳು ಹಾಗೂ ಕಡು ನೀಲಿ ದ್ರಾವಣಗಳನ್ನು ಬಾಟಲಿಗಳಲ್ಲಿ ತುಂಬಿಸಿ ಮನೆ, ಅಂಗಡಿಗಳ ಮುಂದೆ ಇಡುವ ಮೂಲಕ ಈ ಸಮಸ್ಯೆ ತಪ್ಪಿದೆ. ನಾಯಿಗಳ ಕಣ್ಣುಗಳು ನೀಲಿ ಬಣ್ಣಕ್ಕೆ ಅಂಜುತ್ತವೆ’ ಎಂಬುದು ಸ್ಥಳೀಯರ ಪ್ರತಿಪಾದನೆ.</p>.<p>ಅಶೋಕ ನಗರ, ಸುಭಾಷನಗರ, ಚಾಮುಂಡೇಶ್ವರ ನಗರ, ಕ್ರಿಶ್ಚಿಯನ್ ಕಾಲೊನಿ, ಆಸ್ಪತ್ರೆ ರಸ್ತೆ, ಶಂಕರಪುರ ಸೇರಿದಂತೆ ಹಲವೆಡೆ ನೀಲಿ ಬಣ್ಣದ ನೀರಿನ ಬಾಟಲಿಗಳನ್ನು ಕಾಣಬಹುದು. ಉಳಿದ ಬಡಾವಣೆಗಳ ಜನರೂ ಅದನ್ನು ಅನುಕರಿಸುತ್ತಿದ್ದಾರೆ.</p>.<p>ಪ್ರಮುಖವಾಗಿ ಮಾಂಸಾಹಾರ ವ್ಯಾಪಾರ ಮಾಡುವವರು ಮೊಬೈಲ್ ಕ್ಯಾಂಟೀನ್ ಸುತ್ತ ಇಂಥ ಬಾಟಲಿಗಳನ್ನು ಇಡುವುದು ಹೆಚ್ಚುತ್ತಿದೆ. ಬಾಟಲಿ ಇಟ್ಟಿರುವ ಪರಿಧಿಯಿಂದ ನಾಯಿಗಳು ಹೊರಗೆ ಇರುತ್ತವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.</p>.<p>ಕಿರಾಣಿ ಅಂಗಡಿಗಳಲ್ಲಿ ಉಜಾಲಾವನ್ನು ನೀರಿಗೆ ಮಿಶ್ರಣ ಮಾಡಿ ಇಡುತ್ತಿದ್ದಾರೆ. ಆದರೆ, ಬೀದಿನಾಯಿಗಳು ಅವುಗಳ ಮುಂದೆಯೇ ಕೂರುವುದು, ಮೂಸಿ ನೋಡುವುದನ್ನು ಮಾಡುತ್ತಿವೆ.</p>.<p>‘ಪಕ್ಕದ ಮನೆಯವರನ್ನು ಅನುಕರಿಸಿ ನನ್ನ ಕಾರಿನ ಮುಂದೆ ಇಂತಹ ನಾಲ್ಕು ಬಾಟಲಿ ಇರಿಸಿದ್ದೆ. ಆದರೆ, ನಾಯಿಗಳು ಕುತೂಹಲದಿಂದ ಬಾಟಲಿ ಬಳಿ ಬರುತ್ತವೆ. ಚಕ್ರಗಳಿಗೆ ಮೂತ್ರ ವಿಸರ್ಜಿಸಿ ಹೋಗುತ್ತಿವೆ. ಏನೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಥಾಮಸ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>