ತುಮಕೂರು: ‘ಬೆಂಗಳೂರು ನಗರಾಭಿವೃದ್ಧಿ ಖಾತೆ ಕೇಳಬೇಕು ಅಂದುಕೊಂಡಿದ್ದೇನೆ’ ಎಂದು ನೂತನ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಇಲ್ಲಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನೂತನ ಸಚಿವ ಎಸ್ .ಟಿ.ಸೋಮಶೇಖರ್
‘ಮುಖ್ಯಮಂತ್ರಿ ಬಳಿ ಇರುವ ಖಾತೆಗಳನ್ನೆ ನಾವು ವಹಿಸಿಕೊಳ್ಳಬೇಕಿದೆ. ಇಂತಹ ಖಾತೆ ಬೇಕೆಂದು ಪಟ್ಟು ಹಿಡಿಯುವುದಿಲ್ಲ. ನಾನು ಬೆಂಗಳೂರಿನವನೇ ಆಗಿದ್ದರಿಂದ, ನಗರಾಭಿವೃದ್ಧಿ ಕೇಳಬೇಕು ಅಂದುಕೊಂಡಿದ್ದೇನೆ. ಬೇರೆ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ’ ಎಂದು ಅವರು ತಿಳಿಸಿದರು.
‘ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಅವರನ್ನು ಮೇ–ಜೂನ್ನಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ’ ಎಂದು ಅವರು ಹೇಳಿದರು.