ಹುಬ್ಬಳ್ಳಿ:ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ಸದಸ್ಯರಾಗಿ ಕರ್ನಾಟಕದವರಾದ ಇನ್ಫೊಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ, ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ರಮೇಶ ಶೆಟ್ಟಿ, ಬೆಂಗಳೂರಿನ ಸಂಪತ್ ರವಿ ನಾರಾಯಣ ಅವರನ್ನು ಅಲ್ಲಿನ ಸರ್ಕಾರ ಬುಧವಾರ ನೇಮಿಸಿದೆ.
ಸುಧಾ ಮೂರ್ತಿ ಅವರನ್ನು ಟಿಟಿಡಿ ಆಡಳಿತ ಮಂಡಳಿ ಸದಸ್ಯೆಯಾಗಿ 2017 ಮತ್ತು 2018ರಲ್ಲೂ ನೇಮಕ ಮಾಡಲಾಗಿತ್ತು.