ಸುಮಲತಾ ತಿರುಗೇಟು: ತಮ್ಮಣ್ಣ ಹೇಳಿಕೆಗೆ ಮಳವಳ್ಳಿಯಲ್ಲಿ ಸುಮಲತಾ ತಿರುಗೇಟು ನೀಡಿದ್ದು, ‘ಅವರು ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದಾರೆ, ಎಷ್ಟು ಸಲ ನೀರು ಕುಡಿದಿದ್ದಾರೆ, ಊಟ ಮಾಡಿದ್ದಾರೆ ಎಂಬುದನ್ನು ಅವರ ಕುಟುಂಬದವರೇ ಹೇಳಬೇಕು. ಅಂಬರೀಷ್ ಇದ್ದಾಗ ಹೇಗೆ ಇದ್ದರು, ಎಲ್ಲರಿಗೂ ಗೊತ್ತಿದೆ. ಅಂಬರೀಷ್ 24 ಗಂಟೆ ಅತಿಥಿ ಸತ್ಕಾರ ಮಾಡುತ್ತಿದ್ದರು. ಅದೇ ಹಾದಿಯಲ್ಲಿ ನಾನೂ ನಡೆಯುತ್ತಿದ್ದೇನೆ. ಸತ್ಕಾರ ಮಾಡುವುದನ್ನು ಅವರಿಂದ ಕೇಳಿ ತಿಳಿದುಕೊಳ್ಳಬೇಕಾಗಿಲ್ಲ’ ಎಂದರು.