ಸೋವೇನಹಳ್ಳಿಯ ಮಲ್ಲನಕೇರಿ ಸುರೇಶ (25), ಕೋಗಳಿ ಮಾರುತಿ (23), ಹಂಪಸಾಗರದ ಪಿ.ಫಕ್ರುದ್ದೀನ್ (25) ಮೃತರು.
ಐದು ಜನ ಸ್ನೇಹಿತರು ಏಕಕಾಲಕ್ಕೆ ನದಿಗೆ ಇಳಿದಿದ್ದು, ಈ ಪೈಕಿ ಮಂಜುನಾಥ ಈಜಿ ದಡ ಸೇರುವ ಜತೆಗೆ ಅಪಾಯಕ್ಕೆ ಸಿಲುಕಿದ್ದ ಗುಂಡಪ್ಪನನ್ನು ರಕ್ಷಿಸಿದ್ದಾರೆ. ಪ್ರತಿದಿನವೂ ಯುವಕರು ಗುಂಪಾಗಿ ನದಿ ಸ್ನಾನಕ್ಕೆ ಹೋಗುತ್ತಿದ್ದರು. ಇಂದು ಆಳವಾದ ಗುಂಡಿಗಳಿರುವ ಸ್ಥಳಕ್ಕೆ ತೆರಳಿ ಯುವಕರು ದುರಂತ ಸಾವಿಗೀಡಾಗಿದ್ದಾರೆ.