‘ಒಬ್ಬರು ಮುಖ್ಯಮಂತ್ರಿ ಆಗುತ್ತೇನೆಂದು ಪರೀಕ್ಷಿಸಲು ಹೂ ಕೇಳಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿಯಾಗಿಯೇ ಇರಲು ಹೂ ಕೇಳಿದ್ದಾರೆ. ಇಬ್ಬರಿಗೂ ಬಲಭಾಗದಲ್ಲೇ ಹೂ ಕೊಟ್ಟಿದ್ದು, ಇಬ್ಬರನ್ನೂ ಮುಖ್ಯಮಂತ್ರಿ ಮಾಡಬಹುದು’ ಎಂದು ಸೋಮವಾರ ವಿಧಾನಸಭೆಯಲ್ಲಿ ಎ.ಟಿ.ರಾಮಸ್ವಾಮಿ ಹೇಳಿದರು. ಮಧ್ಯೆ ಪ್ರವೇಶಿಸಿದ ರಮೇಶ್ ಕುಮಾರ್, ‘ನಾನು ದೇವಸ್ಥಾನಕ್ಕೆ ಹೋಗಿದ್ದೆ ಸೆಂಟ್ರಲ್ನಲ್ಲಿ ಬಿತ್ತು’ ಎಂದರು. ಆಗ ಸದನನಗೆಗಡಲಲ್ಲಿ ತೇಲಿಸಿತು.