ಉಡುಪಿ: ಶಿಕ್ಷಕರು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಒಂದಷ್ಟು ಮಂದಿ ಪರಿಸರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ವಾರಾಂತ್ಯ ಬಂದರೆ ಇವರೆಲ್ಲ ಒಟ್ಟಾಗಿ ನದಿಯ ಒಡಲು ಸೇರುವ ಪ್ಲಾಸ್ಟಿಕ್ ಹೆಕ್ಕುತ್ತಾರೆ. ಬೀಚ್ ಪರಿಸರದಲ್ಲಿ ಹರಡಿಕೊಂಡ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಉದ್ಯಾನಗಳನ್ನು ಶುಚಿಗೊಳಿಸುತ್ತಾರೆ.