‘ಕೊಲೆಯಾಗಿರುವ ಮದ್ದೂರಿನ ಕೆ.ಎಂ.ದೊಡ್ಡಿಯ ಹನುಮೇಶ್ ಹಾಗೂ ಆರೋಪಿ ರಾಮನಗರದ ಅರುಣ್ ಇಬ್ಬರೂ ಸ್ನೇಹಿತರು. ಕಾರು ಖರೀದಿಸಲು ಮುಂದಾಗಿದ್ದ ಅರುಣ್, ಆ ಬಗ್ಗೆ ಹನುಮೇಶ್ ಬಳಿ ಹೇಳಿಕೊಂಡಿದ್ದ. ಕಾರು ಕೊಡಿಸುವ ಭರವಸೆ ನೀಡಿದ್ದ ಹನುಮೇಶ್, ಮುಂಗಡವಾಗಿ ಅರುಣ್ ಕಡೆಯಿಂದ ₹4.20 ಲಕ್ಷ ಪಡೆದಿದ್ದ. ಇಬ್ಬರೂ ಮುಂಬೈಗೆ ಹೋಗಿ ಕಾರು ಸಹ ನೋಡಿಕೊಂಡು ಬಂದಿದ್ದರು. ಆದರೆ, ಖರೀದಿ ವ್ಯವಹಾರ ಮಾಡಿರಲಿಲ್ಲ’