ಇಲ್ಲಿಯ ಅಂಬೇಡ್ಕರ್ ಭವನದಿಂದ ಸಂಘಪಾಲ ಬಂತೇಜಿ ನೇತೃತ್ವದಲ್ಲಿ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದ ನೂರಾರು ಮಹಿಳೆಯರು ಹಾಗೂ ಯುವಕರು, ವಿಜಯಸ್ತಂಭ ಸ್ಥಳಕ್ಕೆ ಬಂದು ಗೌರವ ಸಲ್ಲಿಸಿದರು. ಬೌದ್ಧ ಉಪಾಸಕರು ಬುದ್ಧ ಪ್ರಾರ್ಥನೆ ಸಲ್ಲಿಸಿದರು. ಜೈಭೀಮ್ ಹಾಗೂ ಕೋರೆಗಾಂವ್ ಯುದ್ಧದ ಪ್ರಮುಖ ಸಿದ್ಧನಾಕ ಹೆಸರಿನಲ್ಲಿ ಜನಸ್ತೋಮ ಕೂಗಿದ ಘೋಷಣೆ ಮುಗಿಲು ಮುಟ್ಟಿತ್ತು. ಇದೇ ವೇಳೆ, ಭೀಮಗೀತೆ ಹಾಗೂ ಕ್ರಾಂತಿಗೀತೆಗಳನ್ನು ಹಾಡಲಾಯಿತು.