‘ಕೃಷ್ಣದೇವರಾಯನಿಗೆರಾಜಗುರುಗಳು,ಪುರಂದರದಾಸರಿಗೆ ದೀಕ್ಷೆ ಕೊಟ್ಟವರು. ಅವರು ಮಾಡಿದ ಕಾರ್ಯಗಳು ನಿತ್ಯದಲ್ಲಿಯೂ ಸ್ಮರಣೀಯವಾದುದು. ಅವರಿಗೆ ಆಗಿರುವ ಈ ಅಪಚಾರ ಅಕ್ಷಮ್ಯ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷ ವಿಧಿಸಬೇಕು. ಸರ್ಕಾರ ಇದರ ಬಗ್ಗೆವಿಶೇಷ ಕಾಳಜಿ ವಹಿಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ.