<p class="title"><strong>ವಾಷಿಂಗ್ಟನ್: </strong>‘ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ಜನರದೇ ನೇತೃತ್ವವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶದಾದ್ಯಂತ ಲಾಕ್ಡೌನ್ ಜಾರಿಗೆ ಜನರ ಸಹಕಾರವನ್ನು ಅವರು ಉದಾಹರಿಸಿದರು.</p>.<p class="title">ಅಮೆರಿಕನ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್ (ಎಎಪಿಐ) ಸದಸ್ಯರ ಜೊತೆಗೆ ವರ್ಚುಯೆಲ್ ಸಭೆಯಲ್ಲಿ ಮಾತನಾಡಿದ ಅವರು, 'ದೇಶವನ್ನು ಸ್ವಾವಲಂಬಿಯಾಗಿಸಲು ಕೋವಿಡ್ ಪರಿಸ್ಥಿತಿ ಒಂದು ಸದವಕಾಶ’ ಎಂದರು.</p>.<p>ಅಮೆರಿಕದ ಸುಮಾರು 80 ಸಾವಿರ ಸದಸ್ಯರನ್ನು ಒಳಗೊಂಡ ಪ್ರಾತಿನಿಧಿಕ ಸಂಸ್ಥೆಯ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಮಾತನಾಡಿದರು. ಎಎಪಿಐ ಅನ್ನು ಉದ್ದೇಶಿಸಿ ಅವರು ಮಾತನಾಡಿದ್ದು ಇದೇ ಮೊದಲು.</p>.<p>ಕೊರೊನಾ ಪಿಡುಗಿನ ಪರಿಣಾಮ ಕುರಿತಂತೆ ವಿವಿಧ ದೇಶಗಳ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಇತರೆ ದೇಶಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರತಿಪಾದಿಸಿದರು.</p>.<p>ಅಮೆರಿಕದಲ್ಲಿ ಪ್ರತಿ ದಶಲಕ್ಷಕ್ಕೆ ಸಾವಿನ ಸಂಖ್ಯೆ 350 ಹಾಗೂ ಐರೋಪ್ಯ ದೇಶಗಳಾದ ಬ್ರಿಟನ್, ಇಟಲಿ, ಸ್ಪೈನ್ನಲ್ಲಿ 600ಕ್ಕೂ ಅಧಿಕವಾಗಿದೆ. ಆದರೆ, ಭಾರತದಲ್ಲಿ ಈ ಸಂಖ್ಯೆ 12ಕ್ಕೂ ಕಡಿಮೆ ಎಂದು ಹೇಳಿದರು.</p>.<p>ಕೊರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಉತ್ತರ ಪ್ರದೇಶ ಗಣನೀಯ ಸಾಧನೆ ಮಾಡಿದೆ. ಅಂತೆಯೇ ಇತರೆ ರಾಜ್ಯಗಳು ಅತ್ಯುತ್ತಮ ಸಾಧನೆಯನ್ನೇ ತೋರುತ್ತಿವೆ ಎಂದು ಪ್ರಧಾನಿ ತಿಳಿಸಿದರು.</p>.<p>ವಿಶ್ವದ ಎರಡನೇ ಅತ್ಯಧಿಕ ಜನಸಂಖ್ಯೆ ಹೊಂದಿರುವ, ಧಾರ್ಮಿಕ ಮತ್ತು ರಾಜಕೀಯ ಸಮಾವೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಭಾರತದಲ್ಲಿ ಜನರ ಸಹಕಾರ ಇಲ್ಲದಿದ್ದರೆಈ ಸಾಧನೆ ಸಾಧ್ಯ ಆಗುತ್ತಿರಲಿಲ್ಲ. ಸಕಾಲದಲ್ಲಿ ಜಾರಿಗೊಳಿಸಿದ ಲಾಕ್ಡೌನ್ ಕ್ರಮದಿಂದಾಗಿ ಭಾರತದಲ್ಲಿ ಲಕ್ಷಾಂತರ ಜನರ ಜೀವರಕ್ಷಣೆಯಾಗಿದೆ ಎಂದು ಪ್ರತಿಪಾದಿಸಿದರು.</p>.<p>ಕೊರೊನಾ ಅನ್ನು ದೇಶದಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯ ಉತ್ತಮ ಪಡಿಸಲು ಒಂದ ಅವಕಾಶವಾಗಿ ಬಳಸಿಕೊಳ್ಳಲಾಗಿದೆ. ಉದಾಹರಣೆಗೆ ಕೋವಿಡ್ ಸ್ಥಿತಿಯ ಆರಂಭದಲ್ಲಿ 1 ಪ್ರಯೋಗಾಲಯವಿತ್ತು. ಈಗ ಸಾವಿರ ಪ್ರಯೋಗಾಲಯಗಳಿವೆ ಎಂದರು.</p>.<p>ಪಿಡುಗು ಕಾಣಿಸಿಕೊಂಡ ಆರಂಭದಲ್ಲಿ ವೈಯಕ್ತಿಕ ಸುರಕ್ಷಾ ಪರಿಕರಗಳು (ಪಿಪಿಇ) ಹೆಚ್ಚು ಮುಖ್ಯವಾಗಿತ್ತು. ಈಗ ಈ ವಿಷಯದಲ್ಲಿ ನಾವು ಸ್ವಾವಲಂಬಿ ಆಗಿದ್ದೇವೆ. ಪ್ರತಿವಾರ ದೇಶದಲ್ಲಿ 30 ಲಕ್ಷ ಎನ್95 ದರ್ಜೆಯ ಮಾಸ್ಕ್, 50 ಸಾವಿರಕ್ಕೂ ಅಧಿಕ ವೆಂಟಿಲೇಟರ್ ಗಳು ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.</p>.<p>ಆರಂಭಿಕವಾಗಿಯೇ ಲಾಕ್ಡೌನ್ ಜಾರಿಗೊಳಿಸಿದ್ದು, ಪರಿಸ್ಥಿತಿ ಎದುರಿಸಲು ಸಹಕಾರಿಯಾಯಿತು ಎನ್ನುವ ಮೂಲಕ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅವರು ಪ್ರಧಾನಿ ಮಾತನ್ನು ಸಮರ್ಥಿಸಿದರು.</p>.<p><strong>ಯೋಗ ಜೀವನಶೈಲಿಯ ಭಾಗ: </strong>ಭಾರತ ಜಾಗತಿಕವಾಗಿ ಆರೋಗ್ಯ ಮತ್ತು ದೈಹಿಕ ದೃಢತೆಗೆ ಎಂದಿಗೂ ಉತ್ತಮ ಕೊಡುಗೆ ನೀಡಿದೆ ಎಂದ ಪ್ರಧಾನಿ, ಯೋಗ ಇಂದು ಜೀವನಶೈಲಿಯ ಆಂತರಿಕ ಭಾಗವೇ ಆಗಿದೆ ಎಂದು ಪ್ರತಿಪಾದಿಸಿದರು.</p>.<p>ಈಗ ವಿಶ್ವದಾದ್ಯಂತ ಆಯುರ್ವೇದವನ್ನು ತ್ವರಿತಗತಿಯಲ್ಲಿ ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.ಭಾರತದ ಆಯುರ್ವೇದ ಮತ್ತು ಇತರೆ ಪರ್ಯಾಯ ಚಿಕಿತ್ಸಾ ಕ್ರಮಗಳು ದೇಹದ ನಿರೋಧಕ ಶಕ್ತಿಯನ್ನು ಉತ್ತಮಪಡಿಸಲಿವೆ ಎಂಬುದು ಅನೇಕ ವಿಜ್ಞಾನ ಸಂಶೋಧಕರ ಅಭಿಮತವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ವಾಷಿಂಗ್ಟನ್: </strong>‘ಕೋವಿಡ್-19 ವಿರುದ್ಧದ ಭಾರತದ ಹೋರಾಟಕ್ಕೆ ಜನರದೇ ನೇತೃತ್ವವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶದಾದ್ಯಂತ ಲಾಕ್ಡೌನ್ ಜಾರಿಗೆ ಜನರ ಸಹಕಾರವನ್ನು ಅವರು ಉದಾಹರಿಸಿದರು.</p>.<p class="title">ಅಮೆರಿಕನ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್ (ಎಎಪಿಐ) ಸದಸ್ಯರ ಜೊತೆಗೆ ವರ್ಚುಯೆಲ್ ಸಭೆಯಲ್ಲಿ ಮಾತನಾಡಿದ ಅವರು, 'ದೇಶವನ್ನು ಸ್ವಾವಲಂಬಿಯಾಗಿಸಲು ಕೋವಿಡ್ ಪರಿಸ್ಥಿತಿ ಒಂದು ಸದವಕಾಶ’ ಎಂದರು.</p>.<p>ಅಮೆರಿಕದ ಸುಮಾರು 80 ಸಾವಿರ ಸದಸ್ಯರನ್ನು ಒಳಗೊಂಡ ಪ್ರಾತಿನಿಧಿಕ ಸಂಸ್ಥೆಯ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಮಾತನಾಡಿದರು. ಎಎಪಿಐ ಅನ್ನು ಉದ್ದೇಶಿಸಿ ಅವರು ಮಾತನಾಡಿದ್ದು ಇದೇ ಮೊದಲು.</p>.<p>ಕೊರೊನಾ ಪಿಡುಗಿನ ಪರಿಣಾಮ ಕುರಿತಂತೆ ವಿವಿಧ ದೇಶಗಳ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಇತರೆ ದೇಶಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರತಿಪಾದಿಸಿದರು.</p>.<p>ಅಮೆರಿಕದಲ್ಲಿ ಪ್ರತಿ ದಶಲಕ್ಷಕ್ಕೆ ಸಾವಿನ ಸಂಖ್ಯೆ 350 ಹಾಗೂ ಐರೋಪ್ಯ ದೇಶಗಳಾದ ಬ್ರಿಟನ್, ಇಟಲಿ, ಸ್ಪೈನ್ನಲ್ಲಿ 600ಕ್ಕೂ ಅಧಿಕವಾಗಿದೆ. ಆದರೆ, ಭಾರತದಲ್ಲಿ ಈ ಸಂಖ್ಯೆ 12ಕ್ಕೂ ಕಡಿಮೆ ಎಂದು ಹೇಳಿದರು.</p>.<p>ಕೊರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಉತ್ತರ ಪ್ರದೇಶ ಗಣನೀಯ ಸಾಧನೆ ಮಾಡಿದೆ. ಅಂತೆಯೇ ಇತರೆ ರಾಜ್ಯಗಳು ಅತ್ಯುತ್ತಮ ಸಾಧನೆಯನ್ನೇ ತೋರುತ್ತಿವೆ ಎಂದು ಪ್ರಧಾನಿ ತಿಳಿಸಿದರು.</p>.<p>ವಿಶ್ವದ ಎರಡನೇ ಅತ್ಯಧಿಕ ಜನಸಂಖ್ಯೆ ಹೊಂದಿರುವ, ಧಾರ್ಮಿಕ ಮತ್ತು ರಾಜಕೀಯ ಸಮಾವೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಭಾರತದಲ್ಲಿ ಜನರ ಸಹಕಾರ ಇಲ್ಲದಿದ್ದರೆಈ ಸಾಧನೆ ಸಾಧ್ಯ ಆಗುತ್ತಿರಲಿಲ್ಲ. ಸಕಾಲದಲ್ಲಿ ಜಾರಿಗೊಳಿಸಿದ ಲಾಕ್ಡೌನ್ ಕ್ರಮದಿಂದಾಗಿ ಭಾರತದಲ್ಲಿ ಲಕ್ಷಾಂತರ ಜನರ ಜೀವರಕ್ಷಣೆಯಾಗಿದೆ ಎಂದು ಪ್ರತಿಪಾದಿಸಿದರು.</p>.<p>ಕೊರೊನಾ ಅನ್ನು ದೇಶದಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯ ಉತ್ತಮ ಪಡಿಸಲು ಒಂದ ಅವಕಾಶವಾಗಿ ಬಳಸಿಕೊಳ್ಳಲಾಗಿದೆ. ಉದಾಹರಣೆಗೆ ಕೋವಿಡ್ ಸ್ಥಿತಿಯ ಆರಂಭದಲ್ಲಿ 1 ಪ್ರಯೋಗಾಲಯವಿತ್ತು. ಈಗ ಸಾವಿರ ಪ್ರಯೋಗಾಲಯಗಳಿವೆ ಎಂದರು.</p>.<p>ಪಿಡುಗು ಕಾಣಿಸಿಕೊಂಡ ಆರಂಭದಲ್ಲಿ ವೈಯಕ್ತಿಕ ಸುರಕ್ಷಾ ಪರಿಕರಗಳು (ಪಿಪಿಇ) ಹೆಚ್ಚು ಮುಖ್ಯವಾಗಿತ್ತು. ಈಗ ಈ ವಿಷಯದಲ್ಲಿ ನಾವು ಸ್ವಾವಲಂಬಿ ಆಗಿದ್ದೇವೆ. ಪ್ರತಿವಾರ ದೇಶದಲ್ಲಿ 30 ಲಕ್ಷ ಎನ್95 ದರ್ಜೆಯ ಮಾಸ್ಕ್, 50 ಸಾವಿರಕ್ಕೂ ಅಧಿಕ ವೆಂಟಿಲೇಟರ್ ಗಳು ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.</p>.<p>ಆರಂಭಿಕವಾಗಿಯೇ ಲಾಕ್ಡೌನ್ ಜಾರಿಗೊಳಿಸಿದ್ದು, ಪರಿಸ್ಥಿತಿ ಎದುರಿಸಲು ಸಹಕಾರಿಯಾಯಿತು ಎನ್ನುವ ಮೂಲಕ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅವರು ಪ್ರಧಾನಿ ಮಾತನ್ನು ಸಮರ್ಥಿಸಿದರು.</p>.<p><strong>ಯೋಗ ಜೀವನಶೈಲಿಯ ಭಾಗ: </strong>ಭಾರತ ಜಾಗತಿಕವಾಗಿ ಆರೋಗ್ಯ ಮತ್ತು ದೈಹಿಕ ದೃಢತೆಗೆ ಎಂದಿಗೂ ಉತ್ತಮ ಕೊಡುಗೆ ನೀಡಿದೆ ಎಂದ ಪ್ರಧಾನಿ, ಯೋಗ ಇಂದು ಜೀವನಶೈಲಿಯ ಆಂತರಿಕ ಭಾಗವೇ ಆಗಿದೆ ಎಂದು ಪ್ರತಿಪಾದಿಸಿದರು.</p>.<p>ಈಗ ವಿಶ್ವದಾದ್ಯಂತ ಆಯುರ್ವೇದವನ್ನು ತ್ವರಿತಗತಿಯಲ್ಲಿ ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.ಭಾರತದ ಆಯುರ್ವೇದ ಮತ್ತು ಇತರೆ ಪರ್ಯಾಯ ಚಿಕಿತ್ಸಾ ಕ್ರಮಗಳು ದೇಹದ ನಿರೋಧಕ ಶಕ್ತಿಯನ್ನು ಉತ್ತಮಪಡಿಸಲಿವೆ ಎಂಬುದು ಅನೇಕ ವಿಜ್ಞಾನ ಸಂಶೋಧಕರ ಅಭಿಮತವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>