ಶುಕ್ರವಾರ ನಡೆಯಬೇಕಿದ್ದ ನಿರ್ಣಾಯಕ ಸಭೆಯನ್ನು ಒಲಿ ಮತ್ತು ದಹಲ್ ಅವರ ಮನವಿ ಮೇರೆಗೆ ಭಾನುವಾರಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಒಲಿ ಅವರ ಮಾಧ್ಯಮ ಸಲಹೆಗಾರ ಸೂರ್ಯ ಥಾಪ ಅವರು ಟ್ವೀಟ್ ಮಾಡಿದ್ದಾರೆ. ಸ್ಥಾಯಿ ಸಮಿತಿಯ ಸಭೆ ಈ ಹಿಂದೆ ಜುಲೈ 2ರಂದು ನಡೆದಿತ್ತು. ಆದರೆ ನಾಯಕರಿಬ್ಬರ ನಡುವೆ ಭಿನ್ನಭಿಪ್ರಾಯ ಬಗೆಹರಿಯದ ಕಾರಣ ಈ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.