ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mauritius

ADVERTISEMENT

PHOTOS: ಮಾರಿಷಸ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

ಮಾರಿಷಸ್‌ಗೆ ಭೇಟಿ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಾತ್ಮ ಗಾಂಧಿ ಮೆಟ್ರೊ ನಿಲ್ದಾಣಕ್ಕೆ ಭೇಟಿಯಿತ್ತರು
Last Updated 12 ಮಾರ್ಚ್ 2024, 14:35 IST
PHOTOS: ಮಾರಿಷಸ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು
err

ಭಾರತ ಮೂಲದ ಮಾರಿಷಸ್‌ ಪ್ರಜೆಗಳಿಗೆ ಒಸಿಐ ಕಾರ್ಡ್

ಮಾರಿಷಸ್‌ನಲ್ಲಿ ನೆಲೆಸಿರುವ ಏಳನೇ ತಲೆಮಾರಿನ ಭಾರತದ ಪ್ರಜೆಗಳಿಗೆ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ ನೀಡಲಾಗುವುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಘೋಷಿಸಿದ್ದಾರೆ.
Last Updated 12 ಮಾರ್ಚ್ 2024, 13:14 IST
ಭಾರತ ಮೂಲದ ಮಾರಿಷಸ್‌ ಪ್ರಜೆಗಳಿಗೆ ಒಸಿಐ ಕಾರ್ಡ್

ಮಾರಿಷಸ್‌ನಲ್ಲಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದ ದ್ರೌಪದಿ ಮುರ್ಮು

ಐತಿಹಾಸಿಕ ದಂಡಿ ಯಾತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಮಾರಿಷಸ್‌ನಲ್ಲಿರುವ ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್‌ಗೆ ಮಂಗಳವಾರ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು.
Last Updated 12 ಮಾರ್ಚ್ 2024, 13:05 IST
ಮಾರಿಷಸ್‌ನಲ್ಲಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದ ದ್ರೌಪದಿ ಮುರ್ಮು

ಭಾರತದ ಜನೌಷಧ ಯೋಜನೆಗೆ ಮಾರಿಷಸ್‌ ಸೇರ್ಪಡೆ: ಪ್ರಧಾನಿ ಮೋದಿ

ಹಿಂದೂ ಮಹಾಸಾಗರ ಪ್ರದೇಶದಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಮಾರಿಷಸ್‌ ಜತೆಯಾಗಿ ಕೆಲಸ ಮಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 29 ಫೆಬ್ರುವರಿ 2024, 14:27 IST
ಭಾರತದ ಜನೌಷಧ ಯೋಜನೆಗೆ ಮಾರಿಷಸ್‌ ಸೇರ್ಪಡೆ: ಪ್ರಧಾನಿ ಮೋದಿ

ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತದ UPI ಆಧರಿತ ಡಿಜಿಟಲ್ ಪಾವತಿಗೆ ಚಾಲನೆ

ಭಾರತದ ಯುಪಿಐ ಆಧರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ನೆರೆಯ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಇಂದು ಚಾಲನೆ ನೀಡಲಾಗಿದೆ.
Last Updated 12 ಫೆಬ್ರುವರಿ 2024, 9:45 IST
ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತದ UPI ಆಧರಿತ ಡಿಜಿಟಲ್ ಪಾವತಿಗೆ ಚಾಲನೆ

Video | ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದ ಮಾರಿಷಸ್‌ ಪ್ರಧಾನಿ 

ಜಿ 20 ಸಭೆಯ ಮುಗಿಸಿದ ಬಳಿ ಮಾರಿಷಸ್‌ನ ಪ್ರಧಾನಿ ಪ್ರವಿಂದ್‌ ಜುಗ್‌ನೌತ್‌ ಅವರು ಉತ್ತರ ಪ್ರದೇಶದ ವಾರಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್‌ ಪೂಜೆ ಸಲ್ಲಿಸಿದ್ದಾರೆ.
Last Updated 11 ಸೆಪ್ಟೆಂಬರ್ 2023, 13:50 IST
Video | ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದ ಮಾರಿಷಸ್‌ ಪ್ರಧಾನಿ 

ಮಾರಿಷಸ್‌, ಸೇಶೆಲ್ಸ್‌ಗೆ ಭಾರತದಿಂದ 'ಕೋವಿಶೀಲ್ಡ್‌' ಲಸಿಕೆ ರವಾನೆ

ಮುಂಬೈ: ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಿಸಲಾಗಿರುವ 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯನ್ನು ಮಾರಿಷಸ್‌ ಹಾಗೂ ಸೇಶೆಲ್ಸ್‌ ರಾಷ್ಟ್ರಗಳಿಗೆ ಕೇಂದ್ರ ಸರ್ಕಾರ ರವಾನಿಸಿದೆ. ಲಸಿಕೆ ಮೈತ್ರಿಯ ಭಾಗವಾಗಿ ನೆರೆಯ ಆರು ರಾಷ್ಟ್ರಗಳಿಗೆ ಭಾರತ ಸರ್ಕಾರ ಕೋವಿಡ್‌–19 ಲಸಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು.
Last Updated 22 ಜನವರಿ 2021, 8:48 IST
ಮಾರಿಷಸ್‌, ಸೇಶೆಲ್ಸ್‌ಗೆ ಭಾರತದಿಂದ 'ಕೋವಿಶೀಲ್ಡ್‌' ಲಸಿಕೆ ರವಾನೆ
ADVERTISEMENT

Photos| ಮಾರಿಷಸ್‌ ಕಡಲ ತೀರದಲ್ಲಿ ದುರಂತಕ್ಕೀಡಾಗಿ ತೈಲ ಚೆಲ್ಲುತ್ತಿದ್ದ ಹಡಗು ಎರಡು ತುಂಡು!

ಪೋರ್ಟ್‌ ಲೂಯಿಸ್‌ (ಮಾರಿಷಸ್‌): ಎರಡು ವಾರಗಳ ಹಿಂದೆ ಇಲ್ಲಿನ ಕರಾವಳಿ ತೀರದಲ್ಲಿ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಸಾವಿರ ಟನ್‌ನಷ್ಟು ತೈಲವನ್ನು ಸಮುದ್ರಕ್ಕೆ ಹರಿಸಿದ್ದ ಬೃಹತ್‌ ಹಡಗು ಈಗ ಎರಡು ಭಾಗವಾಗಿದೆ.ಇದನ್ನೂ ನೋಡಿ:Photos| ಮಾರಿಷಸ್‌ ಕಡಲ ತೀರದಲ್ಲಿ ಜಪಾನ್‌ ಹಡಗು ದುರಂತ: ಅಪಾರ ಪ್ರಮಾಣದ ತೈಲ ಸೋರಿಕೆ, ಜಲಚರಗಳಿಗೆ ಅಪಾಯಜಪಾನ್‌ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ಯ ಒಡೆತನದ ‘ಎಂ.ವಿ.ವಾಕಾಶಿಯೊ’ ಜುಲೈ 25 ರಂದು ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ, ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ದುರಂತಕ್ಕೀಡಾಯಿತು. ಅದರಲ್ಲಿದ್ದ ಅಪಾರ ಪ್ರಮಾಣದ ತೈಲ ಸಮುದ್ರಕ್ಕೆ ಸೋರಿಕೆಯಾಯಿತು. ಇದರಿಂದ ಮ್ಯಾಂಗ್ರೋವ್ ಕಾಡುಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಹಾನಿಗೊಳಗಾದವು.ಅಪಘಾತಕ್ಕೀಡಾದ ಸಮಯದಲ್ಲಿ ಹಡಗು ಬಿರುಕು ಬಿಟ್ಟಿದ್ದನ್ನು ಗಮನಿಸಿದ್ದ ಅಧಿಕಾರಿಗಳು, ಹಡಗು ಎರಡು ತುಂಡಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದರು. ಆಗಸ್ಟ್ 15ರಂದು ಹಡಗು ಇಬ್ಬಾಗವಾಗಿರುವುದಾಗಿಹಡಗಿನ ಆಪರೇಟರ್ ಮಿತ್ಸುಯಿ ಒಎಸ್ಕೆ ಲೈನ್ಸ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಅಪಘಾತಕ್ಕೀಡಾದ ಹಡಗಿನಲ್ಲಿ ಮೂರು ಸಾವಿರ ಟನ್‌ನಷ್ಟು ತೈಲವಿತ್ತು. ಹಡಗಿನ ಬೋರ್ಡ್‌ ಮೇಲೆ 90 ಟನ್‌ ತೈಲವಿತ್ತು. ಅಪಘಾತದ ನಂತರ ಮಾರಿಷಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
Last Updated 17 ಆಗಸ್ಟ್ 2020, 10:44 IST
Photos| ಮಾರಿಷಸ್‌ ಕಡಲ ತೀರದಲ್ಲಿ ದುರಂತಕ್ಕೀಡಾಗಿ ತೈಲ ಚೆಲ್ಲುತ್ತಿದ್ದ ಹಡಗು ಎರಡು ತುಂಡು!
err

ಮಾರಿಷಸ್‌: ಎರಡು ಭಾಗವಾದ ಅಪಘಾತಕ್ಕೀಡಾಗಿದ್ದ ಹಡಗು

ಎರಡು ವಾರಗಳ ಹಿಂದೆ ಇಲ್ಲಿನ ಕರಾವಳಿ ತೀರದಲ್ಲಿ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಸಾವಿರ ಟನ್ನಿಷ್ಟು ತೈಲವನ್ನು ಸಮುದ್ರಕ್ಕೆ ಹರಿಸಿದ್ದ ಬೃಹತ್‌ ಹಡಗು ಈಗ ಇಬ್ಬಾಗವಾಗಿದೆ.
Last Updated 17 ಆಗಸ್ಟ್ 2020, 9:44 IST
ಮಾರಿಷಸ್‌: ಎರಡು ಭಾಗವಾದ ಅಪಘಾತಕ್ಕೀಡಾಗಿದ್ದ ಹಡಗು

Photos| ಮಾರಿಷಸ್‌ ಕಡಲ ತೀರದಲ್ಲಿ ಜಪಾನ್‌ ಹಡಗು ದುರಂತ: ಅಪಾರ ಪ್ರಮಾಣದ ತೈಲ ಸೋರಿಕೆ, ಜಲಚರಗಳಿಗೆ ಅಪಾಯ

ಎರಡು ವಾರಗಳ ಹಿಂದೆ ಮಾರಿಷ್‌ನ ಕಡಲ ತೀರಕ್ಕೆ ಬಂದಿದ್ದ ಜಪಾನ್‌ ಸರಕು ಸಾಗಾಣೆಯ ಬೃಹತ್‌ ಹಡಗೊಂದ್ದು ಹಾನಿಗೀಡಾಗಿ ಮುಳುಗಲಾರಂಭಿಸಿದೆ. ಹಡಗಿನಿಂದ ಸೋರಿಕೆಯಾಗುತ್ತಿರುವ ಅಪಾರ ಪ್ರಮಾಣದ ಡೀಸೆಲ್‌ ಸಮುದ್ರದ ಬೃಹತ್‌ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಅಲ್ಲದೆ, ಕಡ ತೀರವನ್ನೂ ಕಪ್ಪಾಗಿಸಿದೆ. ಇದರಿಂದ ಹಿಂದೂ ಮಹಾಸಾಗರದಲ್ಲಿ ಹವಳದ ದಂಡೆಗಳು, ಮೀನುಗಳೂ ಸೇರಿದಂತೆ ಅಪಾರ ಪ್ರಮಾಣದ ಜಲಚರಗಳಿಗೆ ಅಪಾಯ ಎದುರಾಗಿದೆ.ಜಪಾನ್‌ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ಯ ಒಡೆತನದ ‘ಎಂ.ವಿ.ವಾಕಾಶಿಯೊ’ ಜುಲೈ 25 ರಂದು ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ, ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ದುರಂತಕ್ಕೀಡಾಯಿತು. ಅರ್ಧಭಾಗ ಮುಳುಗಿರುವ ಹಡಗಿನಿಂದ ಸಿಬ್ಬಂದಿಯನ್ನೆಲ್ಲ ಯಶಸ್ವಿಯಾಗಿ ರಕ್ಷಿಸಲಾಗಿದೆ. ಸರಕು ಸಾಗಣಿಕ ಹಡಗಿನಲ್ಲಿ ಖಾಲಿ ಇತ್ತಾದರೂ, 200 ಟನ್‌ನಷ್ಟು ಡೀಸೆಲ್‌, 3,800 ಬಂಕರ್‌ ತೈಲವನ್ನು ದಾಸ್ತಾನು ಮಾಡಲಾಗಿತ್ತು. ಅದು ಈಗ ಸೋರಿಕೆಯಾಗುತ್ತಿದೆ. ನೆಲಕಚ್ಚಿರುವ ಹಡಗಿನಲ್ಲಿ ದೊಡ್ಡ ಬಿರುಕು ಕಂಡು ಬಂದಿದ್ದು, ಎರಡು ತುಂಡಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರೊಂದಿಗೆ ಭಾರಿ ಪ್ರಮಾಣದಲ್ಲಿ ಇಂಧನ ಹೊರಚೆಲ್ಲುವ ಅತಂಕ ಎದುರಾಗಿದೆ.ತೈಲ ಸೋರಿಕೆ ತಡೆಯುವ ಪ್ರಯತ್ನಗಳೆಲ್ಲ ವಿಫಲವಾಗಿವೆ. ಹೀಗಾಗಿ ಕಡಲ ತೀರ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.‘ನೀರಿನಲ್ಲಿ ಅಪಾರ ಪ್ರಮಾಣದ ಇಂಧನ ಬೆರೆತಿದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದೇ ನಮಗೆ ತೋಚುತ್ತಿಲ್ಲ. ಹೀಗಾಗಿ ಫ್ರಾನ್ಸ್‌ ಸರ್ಕಾರದ ನೆರವು ಕೋರಿದ್ದೇವೆ. ಆ ದೇಶದ ಅಧ್ಯಕ್ಷ ಎಮ್ಯಾನುವೆಲ್‌‌ ಮ್ಯಾಕ್ರನ್‌ ಅವರಿಗೂ ಮನವಿ ಮಾಡಿದ್ದೇವೆ’ ಎಂದು ಮಾರಿಷಸ್‌ನ ಪ್ರಧಾನ ಮಂತ್ರಿ ಪ್ರವಿಂದ್‌ ಜುಗ್ನಾಥ್‌ ತಿಳಿಸಿದ್ದಾರೆ.‘ಇಂಧನ ಸೋರಿಕೆಯಿಂದ ಬ್ಲೂ ಬೇ ಮರಿನ್‌ ಪಾರ್ಕ್‌ ಹಾಗೂ ಇತರ ಪ್ರದೇಶಗಳ ನೀರು ರಾಸಾಯನಿಕಯುಕ್ತವಾಗಿದೆ. ನಾವೀಗ ಪರಿಸರ ಬಿಕ್ಕಟ್ಟು ಎದುರಿಸುತ್ತಿದ್ದೇವೆ’ ಎಂದು ಮಾರಿಷಸ್‌ನ ಪರಿಸರ ಸಚಿವ ಕ್ಯಾವಿ ರಮಣೊ ಹೇಳಿದ್ದಾರೆ.‘ಈ ಹಡಗು ಜಪಾನ್‌ನ ಒಕಿಯೊ ಮಾರಿಟೈಮ್‌ ಕಾರ್ಪೊರೇಷನ್‌ ಆ್ಯಂಡ್‌ ನಾಗಸಾಕಿ ಶಿಪ್ಪಿಂಗ್‌ ಕಂಪನಿ‌ ಲಿಮಿಟೆಡ್‌ಗೆ ಸೇರಿದ್ದಾಗಿದೆ. ಈ ಕಂಪನಿಯ ವಿರುದ್ಧ ನಿರ್ಲಕ್ಷ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಡಗು ಜುಲೈ 25ರಂದು ನಮ್ಮ ಆಗ್ನೇಯ ಕರಾವಳಿ ಭಾಗದಲ್ಲಿ ಸಂಚರಿಸಿದೆ’ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಫೋಟೊಗಳು: AFP, AP
Last Updated 11 ಆಗಸ್ಟ್ 2020, 3:40 IST
Photos| ಮಾರಿಷಸ್‌ ಕಡಲ ತೀರದಲ್ಲಿ ಜಪಾನ್‌ ಹಡಗು ದುರಂತ: ಅಪಾರ ಪ್ರಮಾಣದ ತೈಲ ಸೋರಿಕೆ, ಜಲಚರಗಳಿಗೆ ಅಪಾಯ
err
ADVERTISEMENT
ADVERTISEMENT
ADVERTISEMENT