ಈ ಕುರಿತು ಪ್ರತಿಕ್ರಿಯಿಸಿರುವ ಮೂರ್ತಿ, ‘ಖಗೋಳ ವಿಜ್ಞಾನದ ಬಗ್ಗೆ ಹಿಂದಿನಿಂದಲೂ ಆಸಕ್ತಿ ಇತ್ತು. ನೀಲ್ ಆರ್ಮಸ್ಟ್ರಾಂಗ್ ಅವರು ಚಂದ್ರನ ಮೇಲೆ ಇಳಿಯುವುದನ್ನು ನೋಡಿದ್ದೆ. ಆಕಾಶದತ್ತ ತಲೆ ಎತ್ತಿ ನೋಡುವಾಗ ನನ್ನ ಹೆಸರಿನ ಕ್ಷುದ್ರಗ್ರಹ ನೋಡಲು ಖುಷಿ ಎನ್ನಿಸುತ್ತದೆ. ಕ್ಷುದ್ರಗ್ರಹಗಳಿಗೆ ವಿಜ್ಞಾನಿಗಳಲ್ಲದೇ ಬೇರೆಯವರ ಹೆಸರುಗಳನ್ನೂ ಇಡಲಾಗುತ್ತದೆ. ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ಹೆಸರನ್ನೂ ಕ್ಷುದ್ರಗ್ರಹವೊಂದಕ್ಕೆ ಇಡಲಾಗಿದೆ’ ಎಂದರು.